Select Your Language

Notifications

webdunia
webdunia
webdunia
webdunia

ದೇವೇಗೌಡ್ರ ಕಂಡ್ರೆ ಭಯ ಇಲ್ಲ ಎಂದ ಕೇಂದ್ರ ಸಚಿವ

ದೇವೇಗೌಡ್ರ ಕಂಡ್ರೆ ಭಯ ಇಲ್ಲ ಎಂದ ಕೇಂದ್ರ ಸಚಿವ
ಬೆಂಗಳೂರು , ಸೋಮವಾರ, 11 ಮಾರ್ಚ್ 2019 (16:06 IST)
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕಂಡರೆ ನನಗೆ ಯಾವ ಭಯ ಇಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪಕ್ಷದಲ್ಲೇ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನನಗೆ ನಮ್ಮ‌ ಪಕ್ಷದಲ್ಲಿ ಸಮಸ್ಯೆಯಿಲ್ಲ. ನನಗೆ ಜೆಡಿಎಸ್ ಕಾಂಗ್ರೆಸ್ ನವರಿಂದ ವಿರೋಧ ಇದೆ ಎಂದರು. ದೇವೇಗೌಡರು ಅಂದ್ರೆ ಭಯ ಇಲ್ಲ ಎಂದ ಅವರು, ದೇವೇಗೌಡರ ಮೇಲೆ ಗೌರವ ಇದೆ.

ಇಷ್ಟು ದಿನ ಸಣ್ಣವರ ಜೊತೆ ಸೆಣಸಾಡಿದೀನಿ. ಈಗ ದೊಡ್ಡವರು ಸಿಕ್ಕಿದ್ದಾರೆ. ದೊಡ್ಡವರ ಜೊತೆ ಸೆಣಸಾಟ ಖುಷಿ ತಂದಿದೆ. ಇದರಲ್ಲಿ ನಾನು ಯಶಸ್ಸಾಗುವ ವಿಶ್ವಾಸ ಇದೆ ಎಂದು ಸದಾನಂದಗೌಡ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಲೆನಾಡಿನಲ್ಲಿ ಮುಂದುವರಿದ ಕಾಡ್ಗಿಚ್ಚು