Select Your Language

Notifications

webdunia
webdunia
webdunia
webdunia

ದೇವೇಗೌಡ್ರ ಕುಟುಂಬದವರೆಲ್ಲಾ ಸುಳ್ಳುಗಾರರು ಎಂದ ಎಂಎಲ್ಸಿ

ದೇವೇಗೌಡ್ರ ಕುಟುಂಬದವರೆಲ್ಲಾ ಸುಳ್ಳುಗಾರರು ಎಂದ ಎಂಎಲ್ಸಿ
ಬೆಂಗಳೂರು , ಶನಿವಾರ, 9 ಮಾರ್ಚ್ 2019 (16:13 IST)
ಪ್ರಧಾನಿ ನರೇಂದ್ರ ಮೋದಿಯವರನ್ನು ಸುಳ್ಳುಗಾರ ಎನ್ನುವ ಕುಮಾರಸ್ವಾಮಿಯವರಿಗಿಂತ ದೊಡ್ಡ ಸುಳ್ಳುಗಾರ ಬೇರೊಬ್ಬ ಇರಲು ಸಾಧ್ಯವೇ ಇಲ್ಲ. ದೇವೇಗೌಡರ ಕುಟುಂಬದವರೆಲ್ಲ ಸುಳ್ಳುಗಾರರು. ಹೀಗಂತ ಬಿಜೆಪಿ ಎಂಎಲ್ ಸಿ ಟೀಕೆ ಮಾಡಿದ್ದಾರೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಎಂಎಲ್ ಸಿ ರವಿಕುಮಾರ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

 ಎಂಎಲ್ ಸಿ ರವಿಕುಮಾರ್ ಹೇಳಿಕೆ ನೀಡಿದ್ದು, ಇನ್ನು ಒಂದೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ. ಮೊದಲ ಹಂತದಲ್ಲಿಯೇ ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ಘೋಷಣೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನ ಹಾಲಿ ಸಂಸದರು ಇರುವ ಕ್ಷೇತ್ರಗಳಲ್ಲಿ ಪ್ರಭಾವಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕೆಂದು ಸಹ ರಾಷ್ಡ್ರೀಯ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದರು.

ಈಗಿರುವ ಮೋದಿ ಅಲೆ ಗಮನಿಸಿದ್ರೆ ರಾಜ್ಯದಲ್ಲಿ ಬಿಜೆಪಿ 22ಸ್ಥಾನಗಳಲ್ಲಿ ಜಯಗಳಿಸಿದ್ರೂ ಅಚ್ಚರಿಯೇನಿಲ್ಲ ಅಂತ
ರವಿಕುಮಾರ್ ಹೇಳಿದ್ರು. ಮೊದಲು ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವುದು ಖಚಿತವಾಗಲಿ. ನಂತರ ಅವರನ್ನು ಬೆಂಬಲಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬುದನ್ನು ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹತೆ ಭಯದಲ್ಲಿ ಕಾಂಗ್ರೆಸ್ ಶಾಸಕರು