Select Your Language

Notifications

webdunia
webdunia
webdunia
webdunia

ಪ್ರವಾದಿ ನಿಂದನೆ ಅಂಕಣಕಾರನ ಬಂಧನಕ್ಕೆ ಖಂಡನೆ

ಪ್ರವಾದಿ ನಿಂದನೆ  ಅಂಕಣಕಾರನ ಬಂಧನಕ್ಕೆ ಖಂಡನೆ
ಕೊಡಗು , ಮಂಗಳವಾರ, 13 ನವೆಂಬರ್ 2018 (19:01 IST)
ಪ್ರವಾದಿ ನಿಂದನೆ  ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.  

ಸಂತೋಷ್ ತಮ್ಮಯ್ಯ  ಬಂಧನ ಖಂಡಿಸಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಬಂಧನಕ್ಕೆ ಒಳಪಡಿಸಿರುವ ಅಂಕಣಕಾರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯ ಮಾಡಲಾಯಿತು.

ಟಿಪ್ಪು ಜಯಂತಿ ವಿರೋಧಿ ವಿಚಾರ ಸಂಕಿರಣದಲ್ಲಿ ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ  ಸಂಬಂಧಿಸಿದ ಪ್ರಕರಣಕ್ಕೆ  ಲೇಖಕ ಸಂತೋಷ್ ತಮ್ಮಯ್ಯ ಅವರನ್ನು ಗೊಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

 ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದಲ್ಲಿ ನಡೆದಿದ್ದ ಟಿಪ್ಪು ಜಯಂತಿ ವಿರೋಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂತೋಷ್ ತಮ್ಮಯ್ಯ, ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ದೂರು ದಾಖಲಾಗಿತ್ತು. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐವರ ಮೇಲೆ ಎಫ್ ಐ ಆರ್ ದಾಖಲಾಗಿತ್ತು.   ಸಿದ್ದಾಪುರದ ವ್ಯಕ್ತಿಯೋರ್ವನ ದೂರಿನ ಹಿನ್ನೆಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ತಿಂಗಳಾಂತ್ಯದೊಳಗಾಗಿ ಕಿಯೋಸ್ಕ್ ಯಂತ್ರಗಳ ಅಳವಡಿಸಿ ಎಂದ ಆರ್ ಸಿ