Select Your Language

Notifications

webdunia
webdunia
webdunia
webdunia

ನಕಲಿ ಚಿನ್ನ ನೀಡಿ ವಂಚಿಸಿದ್ದ ಖದೀಮರಿಬ್ಬರ ಬಂಧನ

ನಕಲಿ ಚಿನ್ನ ನೀಡಿ ವಂಚಿಸಿದ್ದ ಖದೀಮರಿಬ್ಬರ ಬಂಧನ
ದಾವಣಗೆರೆ , ಮಂಗಳವಾರ, 13 ನವೆಂಬರ್ 2018 (17:44 IST)
ನಕಲಿ ಬಂಗಾರ ನೀಡಿ ವ್ಯಕ್ತಿಯೊಬ್ಬರಿಂದ 5 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ದಾವಣಗೆರೆ ನಗರದ ಎಪಿಎಂಸಿ ಫ್ಲೈಓವರ್‌ ಬಳಿ ಅಕ್ಟೋಬರ್‌ 30ರಂದು ನಕಲಿ ಬಂಗಾರ ನೀಡಿ ಬೆಂಗಳೂರಿನ ವೈದ್ಯನಾಥನ್‌ ಅವರಿಂದ 5.30 ಲಕ್ಷ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಕೆ.ಟಿ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಮಾಚೇನಹಳ್ಳಿ ಕೊರಚರಹಟ್ಟಿಯ ವೆಂಕಟೇಶ್‌ ಎಂ. (32) ಹಾಗೂ ಲಕ್ಕಪ್ಪ (55) ಬಂಧಿತ ಆರೋಪಿಗಳಾಗಿದ್ದಾರೆ.

ಇವರಿಂದ 5.30 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅನಂತದಲ್ಲಿ ಲೀನವಾದ ಅನಂತ: ಅಗ್ನಿಸ್ಪರ್ಶಕ್ಕೆ ಕೆಲವೇ ಕ್ಷಣಗಳ ಮೊದಲು ಬಂದ ಅಮಿತ್ ಶಾ, ಎಲ್ ಕೆ ಅಡ್ವಾಣಿ