Select Your Language

Notifications

webdunia
webdunia
webdunia
webdunia

ಪೊಲೀಸ್ ಜೀಪ್ ಮೇಲೆ ಫೈರಿಂಗ್ ಮಾಡಿದ ರೌಡಿಗಳು ಏನಾದರು ಗೊತ್ತಾ?

ಪೊಲೀಸ್ ಜೀಪ್ ಮೇಲೆ ಫೈರಿಂಗ್ ಮಾಡಿದ ರೌಡಿಗಳು ಏನಾದರು ಗೊತ್ತಾ?
ಬೆಂಗಳೂರು , ಭಾನುವಾರ, 11 ನವೆಂಬರ್ 2018 (19:29 IST)
ಪೊಲೀಸರ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿ ರೌಡಿಗಳು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ರಾಜಧಾನಿಯಲ್ಲಿ ಪೊಲೀಸರ ಗುಂಡು ಸದ್ದು ಮಾಡಿದೆ. ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ರೌಡಿಗಳ ಕಾಲಿಗೆ ಕೆಆರ್ ಪುರಂ ಪೊಲೀಸರು ಗುಂಡು ಹೊಡೆದಿದ್ದಾರೆ.

ಪೊಲೀಸರ ಗುಂಡೇಟು ತಿಂದ ಕೆಆರ್ಪುರಂನ ದೇವಸಂದ್ರ ನವೀನ್ಕುಮಾರ್ ಅಲಿಯಾಸ್ ಅಪ್ಪು ಹಾಗೂ ಗಿರಿ ಅಲಿಯಾಸ್ ಗಿರೀಶ್ ಕೆಆರ್ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರೌಡಿ ಅಪ್ಪು ಹಾರಿಸಿದ ಮೂರು ಸುತ್ತು ಗುಂಡುಗಳು ತಗುಲಿ ಪೊಲೀಸ್ ಜೀಪ್ ಹಿಂಭಾಗದಲ್ಲಿ ಜಖಂಗೊಂಡಿದೆ ಮತ್ತೊಬ್ಬ ರೌಡಿ ಗಿರಿ ಹಿಡಿಯಲು ಬಂದ ಪೊಲೀಸ್ ಪೇದೆ ಮುನಿರಾಜ್ಗೆ ಡ್ರ್ಯಾಗರ್ನಿಂದ ಇರಿದಿದ್ದು ಗಾಯಗೊಂಡಿರುವ ಮುನಿರಾಜ್ ಸತ್ಯಸಾಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

80 ಕೋಟಿ ರೂ.ಗಳ ಕಾಮಗಾರಿಗೆ ಜಿಲ್ಲಾ ಸಚಿವರಿಂದ ಶಂಕುಸ್ಥಾಪನೆ