Select Your Language

Notifications

webdunia
webdunia
webdunia
webdunia

ಮುಂದುವರಿದ ಸಿಎಂ ಎಚ್ ಡಿಕೆ ಟೆಂಪಲ್ ರನ್: ಇಂದು ಎಲ್ಲಿಗೆ ಗೊತ್ತಾ?

ಮುಂದುವರಿದ ಸಿಎಂ ಎಚ್ ಡಿಕೆ ಟೆಂಪಲ್ ರನ್: ಇಂದು ಎಲ್ಲಿಗೆ ಗೊತ್ತಾ?
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (08:54 IST)
ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಹಲವು ದೇವಾಲಯಗಳಿಗೆ ಭೇಟಿಕೊಡುತ್ತಾ ಬಂದಿರುವ ಸಿಎಂ ಕುಮಾರಸ್ವಾಮಿ ಇಂದು ಹರಕೆ ತೀರಿಸಲು ದೂರದ ಅಜ್ಮೀರಕ್ಕೆ ತೆರಳಲಿದ್ದಾರೆ.

ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಲಯಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ತಮಿಳುನಾಡು, ತಿರುಪತಿ ದೇವಾಲಯಗಳಿಗೂ ಹಿಂದೆ ಭೇಟಿ ಕೊಟ್ಟು ಹರಕೆ ತೀರಿಸಿದ್ದರು. ಇದೀಗ ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಕುಟುಂಬ ಸಮೇತರಾಗಿ ಭೇಟಿ ಕೊಡಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪ್ರವಾಹದಿಂದಾಗಿ ಜನರು ಸಂಕಷ್ಟದಲ್ಲಿರುವಾಗಲೂ ಸಿಎಂ ಈ ರೀತಿ ಟೆಂಪಲ್ ರನ್ ಮಾಡುತ್ತಿರುವುದಕ್ಕೆ ಟೀಕೆಯೂ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತೆರೆಮರೆಯಲ್ಲಿ ಪರಮೇಶ್ವರ್-ಸಿದ್ದರಾಮಯ್ಯ ಹಗ್ಗಜಗ್ಗಾಟ