Select Your Language

Notifications

webdunia
webdunia
webdunia
webdunia

ರೇವಣ್ಣ ಬಿಸ್ಕತ್ ಎಸೆದಿದ್ದು ತಪ್ಪಾದರೆ, ಬಿಎಸ್ ವೈ ಚಾಕುವಿನಲ್ಲಿ ಕೇಕ್ ತಿನಿಸಿದ್ದು ತಪ್ಪಲ್ಲವೇ? ರೇವಣ್ಣ ಅಭಿಮಾನಿಗಳ ಫೋಟೋ ವಾರ್!

ರೇವಣ್ಣ ಬಿಸ್ಕತ್ ಎಸೆದಿದ್ದು ತಪ್ಪಾದರೆ, ಬಿಎಸ್ ವೈ ಚಾಕುವಿನಲ್ಲಿ ಕೇಕ್ ತಿನಿಸಿದ್ದು ತಪ್ಪಲ್ಲವೇ? ರೇವಣ್ಣ ಅಭಿಮಾನಿಗಳ ಫೋಟೋ ವಾರ್!
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (09:58 IST)
ಬೆಂಗಳೂರು: ಕೊಡಗು ಪ್ರವಾಹ ಸಂತ್ರಸ್ತರಿಗೆ ಸಚಿವ ಎಚ್ ಡಿ ರೇವಣ್ಣ ಬಿಸ್ಕತ್ ಎಸೆದಿದ್ದು ವಿವಾದವಾಗುತ್ತಿದ್ದಂತೆ ಬಿಎಸ್ ವೈ ಚಾಕುವಿನಲ್ಲಿ ಮಕ್ಕಳಿಗೆ ಕೇಕ್ ತಿನಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ರೇವಣ್ಣ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.

ರೇವಣ್ಣ ಬಿಸ್ಕತ್ ಎಸೆದಿದ್ದುತಪ್ಪಾದರೆ ಬಿಎಸ್ ವೈ ಚಾಕುವಿನಲ್ಲಿ ಕೇಕ್ ತಿನಿಸಿದ್ದು ತಪ್ಪಲ್ಲವೇ ಎಂದು ಬಿಎಸ್ ವೈ ಕೇಕ್ ಕತ್ತರಿಸಿ ಮಕ್ಕಳಿಗೆ ಚಾಕುವಿನಲ್ಲೇ ತಿನಿಸುವ ಫೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಏಟು-ತಿರುಗೇಟು ನೀಡುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಕೈಯಾರೆ ಕೇಕ್ ತಿನಿಸದೇ ಮಕ್ಕಳಿಗೆ ಕೇಕ್ ಕಟ್ ಮಾಡುವ ಚಾಕುವಿನಲ್ಲೇ ಕೇಕ್ ತಿನಿಸುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ರೇವಣ್ಣ-ಬಿಎಸ್ ವೈ ಅಭಿಮಾನಿಗಳು ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಬಿಸ್ಕತ್ ಎಸೆದ ಪ್ರಕರಣಕ್ಕೆ ಸಚಿವ ಎಚ್ ಡಿ ರೇವಣ್ಣ ಕೊಟ್ಟ ಸಮಜಾಯಿಷಿ ಏನು?