Select Your Language

Notifications

webdunia
webdunia
webdunia
webdunia

ವಾಜಪೇಯಿ ಚಿತಾಭಸ್ಮ ಪಡೆಯಲು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ

ವಾಜಪೇಯಿ ಚಿತಾಭಸ್ಮ ಪಡೆಯಲು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (09:41 IST)
ಬೆಂಗಳೂರು: ಕಳೆದ ವಾರ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ದೇಶದ ಹಲವು ಪವಿತ್ರ ನದಿಗಳಲ್ಲಿ ವಿಸರ್ಜಿಸಲಾಗುತ್ತಿದೆ.

ಕರ್ನಾಟಕದ ಏಳು ನದಿಗಳಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜಿಸಲಾಗುವುದು. ಹೀಗಾಗಿ ಬಿಜೆಪಿ ಮುತ್ಸುದ್ದಿ ನಾಯಕನ ಚಿತಾಭಸ್ಮ ಪಡೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರಿಗೆ ವಾಜಪೇಯಿ ಚಿತಾಭಸ್ಮ ವಿತರಿಸಲಿದ್ದಾರೆ. ಆಯಾ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರು ಆಯಾ ರಾಜ್ಯಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ. ಬಿಎಸ್ ವೈ ಜತೆಗೆ ಸಂಸದ ಪಿಸಿ ಮೋಹನ್, ಸುರೇಶ್ ಅಂಗಡಿ ಅವರೂ ತೆರಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲೀಗ ಮೀನುಗಾರರೇ ಹೀರೋಗಳು!