Select Your Language

Notifications

webdunia
webdunia
webdunia
webdunia

ಕಿರುತೆರೆಗೆ ಎಂಟ್ರಿ ಕೊಟ್ಟ ಚಂದ್ರು: ಇನ್ಮೊಂದೆ ಒನ್‌ಮೋರ್‌ ಒನ್‌ಮೋರ್‌ ಅನ್ಬೇಕು ಅಷ್ಟೇ!

Chandru

Sampriya

ಬೆಂಗಳೂರು: , ಸೋಮವಾರ, 25 ಮಾರ್ಚ್ 2024 (14:23 IST)
photo Courtesy Instagram
ಬೆಂಗಳೂರು:  ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಅವರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸವಿರುಚಿ' ಸೀಸನ್ 3ರಲ್ಲಿ ನಿರೂಪಕಿ ಜಾಹ್ನವಿ ಅವರ ಜತೆ ಅಡುಗೆ ಮಾಡಿ ಕನ್ನಡಿಗರಿಗೆ ತೋರಿಸಲಿದ್ದಾರೆ. ಈ ಬಗ್ಗೆ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಜಾಹ್ನವಿ ಈಗಾಗಲೇ ಕಲರ್ಸ್ ಕನ್ನಡದ ಹಲವು ಟಾಕ್‌ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ 'ಗಿಚ್ಚಿ ಗಿಲಿ ಗಿಲಿ', 'ನನ್ನಮ್ಮ ಸೂಪರ್ ಸ್ಟಾರ್‌'ನಂತರ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ 'ಸವಿರುಚಿ' ಶೋಗೂ ಎಂಟ್ರಿ ಕೊಟ್ಟಿದ್ದು, ಅವರ ಜೊತೆಗೆ ಚಂದ್ರು ಕೂಡ ಬಂದಿರುವುದು ವಿಶೇಷ.

ಚಂದ್ರುಗೆ ಖ್ಯಾತಿ ತಂದ ಬೆಳ್ಳುಳ್ಳಿ ಕಬಾಬ್: ಹೊಟೇಲ್ ಮಾಲೀಕರಾಗಿರುವ ಚಂದ್ರುಗೆ ಬೆಳ್ಳುಳ್ಳಿ ಕಬಾಬ್ ರೆಸಿಪಿ ತುಂಬಾನೇ ಖ್ಯಾತಿ ತಂದುಕೊಟ್ಟಿದ್ದು. ಈ ಹಿಂದೆಯೂ ಇವರು ಮಾಲಶ್ರೀ ಅವರ ಮೇಕಪ್‌ ಮ್ಯಾನ್ ಆಗಿ ಕೆಲಸ ಮಾಡಿದ್ದರು. ದೊಡ್ಮನೆ ನಂಟಿನೊಂದಿಗೆ ಹೊಟೇಲ್ ಉದ್ಯಮ ಆರಂಭಿಸಿದ್ದರು. ಸದ್ಯ ಯಶಸ್ವಿಯಾಗಿ ಇವರು ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಸವಿರುಚಿ' ಪ್ರೋಮೋ ರಿಲೀಸ್

'ಸವಿರುಚಿ' ಕಾರ್ಯಕ್ರಮದ ಕುರಿತಾಗಿ ಈಗಾಗಲೇ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿದೆ. ಏ.9ರ ಯುಗಾದಿ ಹಬ್ಬದ ದಿನ 'ಸವಿರುಚಿ' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಪ್ರತಿದಿನ 12 ಗಂಟೆಗೆ ಈ ಶೋ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಗೆ ಬರ್ತಿದ್ದಾರೆ ನಟಿ ಪ್ರೇಮಾ