Select Your Language

Notifications

webdunia
webdunia
webdunia
webdunia

ಎಂಗೇಜ್ ಮೆಂಟ್ ಮಾಡಿಕೊಂಡ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ

Kaustubha Mani

Krishnaveni K

ಬೆಂಗಳೂರು , ಬುಧವಾರ, 6 ಮಾರ್ಚ್ 2024 (16:18 IST)
Photo Courtesy: Instagram
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಈಗ ಮದುವೆ ಪರ್ವ ಎನಿಸುತ್ತಿದೆ. ಒಬ್ಬರಾದ ಮೇಲೊಬ್ಬ ನಟಿಯರು ಮದುವೆ ಸುದ್ದಿ ಕೊಡುತ್ತಿದ್ದಾರೆ. ಇದೀಗ ನಟಿ ಕೌಸ್ತುಭ ಮಣಿ ಎಂಗೇಜ್ ಮೆಂಟ್ ಸುದ್ದಿ ಕೇಳಿಬಂದಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರವಾಹಿಯಲ್ಲಿ ನಾಯಕಿ ಇಂಚರಾ ಪಾತ್ರ ಮಾಡುತ್ತಿದ್ದ ಕೌಸ್ತುಭ ಮಣಿ ಈಗ ಮದುವೆಯಾಗುತ್ತಿದ್ದಾರೆ. ಅವರ ಕೈ ಹಿಡಿಯಲಿರುವ ಹುಡುಗನ ಹೆಸರು ಸಿದ್ಧಾಂತ್ ಸತೀಶ್. ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ನಡೆದಿದೆ.

ಎಂಗೇಜ್ ಮೆಂಟ್ ನ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕೌಸ್ತುಭ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಕೌಸ್ತುಭ ಸುವರ್ಣ ವಾಹಿನಿಯಲ್ಲಿ ಗೌರಿ ಶಂಕರ ಧಾರವಾಹಿಯ ನಾಯಕಿ ಪಾತ್ರದಿಂದ ಹೊರಬಂದಿದ್ದರು. ಇದಲ್ಲದೆ ಒಂದು ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು. ಇದೀಗ ಮದುವೆಯಾಗಲು ಹೊರಟಿದ್ದಾರೆ.

ಮೊನ್ನೆಯಷ್ಟೇ ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ದಿಡೀರ್ ಆಗಿ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅದಾದ ಬಳಿಕ ಮತ್ತೊಬ್ಬ ಕಿರುತೆರೆ ನಟಿ ನಯನಾ ನಾಗರಾಜ್ ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕೌಸ್ತುಭ ಸರದಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯ ರಾಮಮಂದಿರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ