Select Your Language

Notifications

webdunia
webdunia
webdunia
webdunia

ರಾಜ್ಯ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದ ಡಿಸಿಎಂ

ರಾಜ್ಯ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದ ಡಿಸಿಎಂ
ಚಿತ್ರದುರ್ಗ , ಮಂಗಳವಾರ, 26 ಜೂನ್ 2018 (16:48 IST)
ಮಾಜಿ ಸಿಎಂ ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ರಾಜ್ಯ ಸರಕಾರ ಐದು ವರ್ಷ ಪೂರ್ಣ ಆಡಳಿತ ನಡೆಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ರಚನೆ ವೇಳೆ ಐದು ವರ್ಷಗಳ ಒಪ್ಪಂದ ಆಗಿದೆ. ನೀವು ತಿರುಗಿಸಿ ಅದನ್ನೇ ಕೇಳಿದರೆ ನಾನು ಅದನ್ನೇ ಹೇಳ್ತಿನಿ ಎಂದು ಪತ್ರಕರ್ತರ ಮೇಲೆ ಪರಮೇಶ್ವರ ಗರಂ ಆದರು. ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಎನ್ನುವುದನ್ನು ಹೇಳುವುದಕ್ಕೆ ಆಗುವುದಿಲ್ಲ. ಆದರೂ ನಾವು ಒಪ್ಪಂದದಂತೆ ಐದು ವರ್ಷಗಳ ಸರಕಾರ ನಡೆಸುತ್ತೇವೆ ಎಂದರು.

ಮೈತ್ರಿ ಸರಕಾರದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯನವರು ಯಾವ ಕಾರಣಕ್ಕೆ  ಅಸಮಧಾನಗೊಂಡು ಹಾಗೆ ಹೇಳಿದ್ದಾರೋ ಎನ್ನುವುದನ್ನು ಅವರನ್ನೇ ಕೇಳಬೇಕು ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಭಾಪತಿ ಹುದ್ದೆ: ಬಸವರಾಜ ಹೊರಟ್ಟಿ ಮನದಾಳದ ಮಾತು