Select Your Language

Notifications

webdunia
webdunia
webdunia
webdunia

ಪೇದೆ ಆತ್ಮಹತ್ಯೆ ಪ್ರಕರಣ ಹಿಂದೆ ಆಸ್ತಿ ಕಲಹ ಕೈವಾಡ ಶಂಕೆ!

ಪೇದೆ ಆತ್ಮಹತ್ಯೆ ಪ್ರಕರಣ ಹಿಂದೆ ಆಸ್ತಿ ಕಲಹ ಕೈವಾಡ ಶಂಕೆ!
ಬಾಗಲಕೋಟೆ , ಭಾನುವಾರ, 2 ಡಿಸೆಂಬರ್ 2018 (16:03 IST)
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಪೇದೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.

ಆಸ್ತಿ ಅನುಭವಿಸುವ ಉದ್ದೇಶದಿಂದ ಸಂಬಂಧಿಕರಿಂದಲೇ ಜೀವ ಬೆದರಿಕೆಗಳಿವೆ. ಹಿನ್ನೆಲೆಯಲ್ಲಿ  ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಪೇದೆ ಮಂಜುನಾಥ್ ಡೆತ್ ನೋಟ್ ಬರೆದು ಇಟ್ಟಿರುವುದು ಪತ್ತೆಯಾಗಿದೆ. ನನಗೆ ನಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ . ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ನಡುವೆ ಬರೀ ಕತ್ತಲೆ ಎಂದು ಬರೆದು, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಎಲ್ಲಾ ರೀತಿಯಿಂದ ನನಗೆ ಸಹಕಾರ ನೀಡಿದ್ದಾರೆ ಎಂದು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ.
ತಮ್ಮ  ಕುಟುಂಬ ಬಹಳ ಮುಗ್ಧ ಮನಸ್ಥಿತಿ ಹೊಂದಿದ್ದು, ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಸಾಕಿ ಸಲುಹಿದ ನನ್ನ ತಾಯಿಗೆ ಕ್ಷಮೆ ಕೇಳುತ್ತೇನೆ ಎಂದು ಡೆತ್ ನೋಟ್ ಬರೆದಿದ್ದಾರೆ.

ಡೆತ್ನೋಟ್ನಲ್ಲಿ ಚಿಕ್ಕಪ್ಪಂದಿರ ಹೆಸರು ಉಲ್ಲೇಖಿಸಿದ್ದು, ನನಗೆ ಶನಿಯಾಗಿ ಕಾಡಿದ್ದು, ಹನಮಪ್ಪ ಮಾದರ, ಮರಿಯಪ್ಪ ಮಾದರ. ಇವರು ನನ್ನ ಜೀವನ ಎಂಬ ದೋಣಿಯಲ್ಲಿ ಆಟವಾಡಿದ್ದಾರೆ. ನನ್ನ ತಂದೆಯ ಆಸ್ತಿಯನ್ನು ತಾವೇ ಅನುಭವಿಸುವ ಉದ್ದೇಶದಿಂದ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಕಾರಣದಿಂದಲೇ  ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಚೇತರಿಸಿಕೊಳ್ಳುತ್ತಿರುವ ತುಮಕೂರು ಸಿದ್ದಗಂಗಾ ಶ್ರೀಗಳು