Select Your Language

Notifications

webdunia
webdunia
webdunia
webdunia

ಟ್ರ್ಯಾಕ್ಟರ್ ಕಲಿಯುವ ಆಸೆಪಟ್ಟು ಜೀವ ಕಳೆದುಕೊಂಡ ಹುಡುಗ

ಟ್ರ್ಯಾಕ್ಟರ್ ಕಲಿಯುವ ಆಸೆಪಟ್ಟು ಜೀವ ಕಳೆದುಕೊಂಡ ಹುಡುಗ
ರಾಮನಗರ , ಶುಕ್ರವಾರ, 28 ಡಿಸೆಂಬರ್ 2018 (14:06 IST)
ರಾಮನಗರ: ಟ್ರ್ಯಾಕ್ಟರ್ ಕಲಿಯುವ ಆಸೆಪಟ್ಟು ಹುಡುಗನೊಬ್ಬ ಜೀವ ಕಳೆದುಕೊಂಡ  ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾದೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.


8ನೇ ತರಗತಿ ಓದುತ್ತಿದ್ದ ಕುಶಾಲ್ (14) ಮೃತ ವಿದ್ಯಾರ್ಥಿ. ಕುಶಾಲ್ ಮನೆಯ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೋಗಿದ್ದನು. ಆಗ ಟ್ರ್ಯಾಕ್ಟರ್ ಚಲಾಯಿಸುವಾಗ ಏಕಾಏಕಿ ಪಲ್ಟಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಬಿದ್ದು ಕುಶಾಲ್ ಮೃತಪಟ್ಟಿದ್ದಾನೆ.


ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?