Select Your Language

Notifications

webdunia
webdunia
webdunia
webdunia

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬಳಸಿ ಯುವತಿಗೆ ವಂಚನೆ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬಳಸಿ ಯುವತಿಗೆ ವಂಚನೆ
ಚಾಮರಾಜನಗರ , ಮಂಗಳವಾರ, 13 ನವೆಂಬರ್ 2018 (06:42 IST)
ಚಾಮರಾಜನಗರ : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ನಂತರ ಆಕೆಗೆ ವಂಚಿಸಿರುವ ಪ್ರಕರಣವೊಂದು ಗಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕಮರಹಳ್ಳಿಯಲ್ಲಿ ನಡೆದಿದೆ.


 ಆರೋಪಿ ಕಮರಹಳ್ಳಿಯ ಮಹದೇವಪ್ರಸಾದ್​ ಎಂಬುದಾಗಿ ತಿಳಿದುಬಂದಿದ್ದು, ಈತ ಯುವತಿಯೊಬ್ಬಳ ಜೊತೆ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ, ಆಕೆಯಿಂದ ಬೈಕ್ ಕೂಡ ತೆಗೆಸಿಕೊಂಡು ಈಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಆತನ ಕುಟುಂಬದವರಿಗೆ ತಿಳಿಸಿದಾಗ ಆಕೆಗೆ  ಕುಟುಂಬದವರು  ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ.


ಈ ಬಗ್ಗೆ ಯುವತಿ ಇದೀಗ ಗುಂಡ್ಲುಪೇಟೆ ಠಾಣೆಯಲ್ಲಿ ಮಹದೇವಪ್ರಸಾದ್​  ಹಾಗೂ ಆತನ ಕುಟುಂಬದವರ ವಿರುದ್ಧ  ದೂರು ದಾಖಲಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ ಅಗಲಿಕೆ: ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕರಿಂದ ಸಂತಾಪ