Select Your Language

Notifications

webdunia
webdunia
webdunia
webdunia

ಪ್ರವಾಹ ಪೀಡಿತ ಕೊಡಗಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭೇಟಿ

ಪ್ರವಾಹ ಪೀಡಿತ ಕೊಡಗಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭೇಟಿ
ಕೊಡಗು , ಶುಕ್ರವಾರ, 24 ಆಗಸ್ಟ್ 2018 (08:43 IST)
ಕೊಡಗು: ಪ್ರವಾಹ ಪೀಡಿತ ಕೊಡಗಿನ ಸ್ಥಿತಿಗತಿ ಅಧ್ಯಯನ ನಡೆಸಲು ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭೇಟಿ ಕೊಡುತ್ತಿದ್ದಾರೆ.
 

ಬೆಳಿಗ್ಗೆ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ನಿರ್ಮಲಾ ಸೀತಾರಾಂ ಬಳಿಕ ಕೊಡಗಿಗೆ ಭೇಟಿ ನೀಡಲಿದ್ದಾರೆ.  ನಂತರ ಮಾದಾಪುರ ಸೇರಿದಂತೆ ಕೊಡಗಿನಲ್ಲಿ ಪ್ರವಾಹದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಅದಾದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಕೇಂದ್ರದ ಪ್ರತಿನಿಧಿಯಾಗಿ ಬರುವ ನಿರ್ಮಲಾ ಸೀತಾರಾಂ ಸುಮಾರು ಮೂರು ಗಂಟೆಗಳ ಕಾಲ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮುಗಿಸಲಿದ್ದಾರೆ. ಇಲ್ಲಿನ ಪರಿಸ್ಥಿತಿಗಳ ವರದಿಯನ್ನು ಕೇಂದ್ರಕ್ಕೆ ಅವರು ನೀಡಲಿದ್ದಾರೆ. ಇದರಿಂದ ಕೊಡಗಿಗೆ ಕೇಂದ್ರದಿಂದ ಇನ್ನಷ್ಟು ಸಹಾಯ ಸಿಗುವ ನಿರೀಕ್ಷೆಯಿದೆ. ಹೀಗಾಗಿ ರಕ್ಷಣಾ ಸಚಿವರ ಭೇಟಿ ಮಹತ್ವದ್ದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಜರ್ಮನಿಗೆ ಹೋಗಿ ಐಸಿಸ್ ಉಗ್ರರನ್ನು ಸರ್ಮಥಿಸಿದರೇ ರಾಹುಲ್ ಗಾಂಧಿ?!