Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ನನ್ನನ್ನು ಚುನಾವನಾ ಪ್ರಚಾರಕ್ಕೆ ಕರೆದಿಲ್ಲ: ಸುಮಲತಾ ಅಂಬರೀಶ್

Sumalatha

Sampriya

ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2024 (15:00 IST)
ಬೆಂಗಳೂರು:  ಎಚ್‌ ಡಿ ಕುಮಾರಸ್ವಾಮಿ ಅವರು ನನ್ನನ್ನು ಯಾವುದೇ ಚುನಾವಣಾ ಪ್ರಚಾರಕ್ಕೂ ಕರೆದಿಲ್ಲ. ಮನೆಗೆ ಅವರು ಬಂದು ಹೋದ ಮೇಲೆ ನಮ್ಮ ಜತೆ ಮಾತುಕತೆನೆ ನಡೆದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು.

ಎಚ್‌ಡಿಕೆ ಅವರ ಪರ ಮತ ಪ್ರಚಾರದಲ್ಲಿ ಪಾಲ್ಗೊಂಳ್ಳದರ  ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು,  ಇದುವರೆಗೂ ನನ್ನನ್ನು ಎಚ್ ಡಿ ಕುಮಾರಸ್ವಾಮಿ ತಮ್ಮ ಪರ ಮತ ಪ್ರಚಾರದಲ್ಲಿ ಪಾಲ್ಗೊಳ್ಳಲು ಕೇಳಿಕೊಂಡಿಲ್ಲ.

 ನಾನು ಪಕ್ಷಕ್ಕೆ ಸೇರ್ಪಡೆಯಾದ ಕ್ಷಣವೇ ಹೇಳಿದ್ದೆ. ಬಿಜೆಪಿ ನಾಯಕರು ಹೇಳಿದ ಅಭ್ಯರ್ಥಿ ಪರ ಮತ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆಂದು. ಅದಲ್ಲದೆ ಮೋದಿ ಕಾರ್ಯಕ್ರಮದಲ್ಲೂ ಈ ಬಗ್ಗೆ ನಾನು ಹೇಳಿಕೊಂಡಿದ್ದೆ. ಆದರೆ ನಾನು ಎಚ್‌ಡಿಕೆ ಪರವಾಗಿ ಮತಪ್ರಚಾರ ಮಾಡುವಂತೆ ಯಾರು ಕೇಳಿಕೊಂಡಿಲ್ಲ ಎಂದರು.

ಇನ್ನೂ ಸುಮಲತಾ ಅವರ ಹೇಳಿಕೆಗೆ ಅಸನಾಧಾನ ಹೊರಹಾಕಿದ ಎಚ್‌ಡಿ ಕುಮಾರಸ್ವಾಮಿ ಅವರು, ಅವರ ಮನೆಗೆ ಹೋಗಿಯೇ ಸಹಕಾರವನ್ನು ಕೇಳಿದ್ದಾನೆ. ಅದಕ್ಕಿಂತ ಬೇರೆನೂ ಮಾಡಬೇಕು. ಅಂಬರೀಶ್ ಅವರ ಅಭಿಮಾನಿಗಳು ನಮ್ಮ ಪರ ಕೆಲಸ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಜನರು ಸಹಕಾರ ನೀಡಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚಾರಕ್ಕೆ ಬಾರದ ಸುಮಲತಾ ಮೇಲೆ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ