Select Your Language

Notifications

webdunia
webdunia
webdunia
webdunia

ವಿದ್ಯುತ್ ಅವಘಡಕ್ಕೆ ತಂದೆ, ಮಗ ಬಲಿ: ಪತ್ನಿ ಬಚಾವ್

ವಿದ್ಯುತ್ ಅವಘಡಕ್ಕೆ ತಂದೆ, ಮಗ ಬಲಿ: ಪತ್ನಿ ಬಚಾವ್
ಗಂಗಾವತಿ , ಮಂಗಳವಾರ, 26 ಜೂನ್ 2018 (23:04 IST)
ವಿದ್ಯುತ್ ತಂತಿ ತಗುಲಿದ ಪರಿಣಾಮ ತಂದೆ, ಮಗ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. 
ಗಂಗಾವತಿಯ ವಿಠಲಾಪೂರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಮಲ್ಲಪ್ಪ ಮತ್ತು ರಮೇಶ್ ಸಾವನ್ನಪ್ಪಿದ ತಂದೆ, ಮಗ. ತಂದೆ ಮಲ್ಲಪ್ಪ ಹೊಲದಲ್ಲಿ ನೀರು ಹಾಯಿಸುವಾಗ ಮೋಟಾರ್ ಚಾಲನೆ ಮಾಡುವ ವೇಳೆ ವಿದ್ಯುತ್ ಸ್ಪರ್ಷವಾಗಿದೆ. ಇದನ್ನು ಕಂಡು ಮಗ ರಮೇಶ್ ತಂತಿ ಎಳೆಯಲು ಮುಂದಾದಾಗ ಆತನಿಗೂ ವಿದ್ಯುತ್ ತಗುಲಿದೆ.

ಈ ಸಂದರ್ಭದಲ್ಲಿಯೇ ಮಲ್ಲಪ್ಪನ ಪತ್ನಿ ಕೂಡ ವಿದ್ಯುತ್ ತಂತಿ ಬಳಿ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಅವರ ಸಾಕು ನಾಯಿ ತಂತಿಯನ್ನು ಬಾಯಿಯಲ್ಲಿ ಹಿಡಿದು ಎಳೆದಿದ್ದರಿಂದ ಅದೂ ಕೂಡ ಸಾವನ್ನಪ್ಪಿತು. ಇದನ್ನು ಗಮನಿಸಿದ ಮಲ್ಲಪ್ಪನ ಪತ್ನಿ ದೂರ ಉಳಿದುಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾದಳು. ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕರ್ತರಿಂದ ಕರಾಳ ದಿನಾಚರಣೆ