Select Your Language

Notifications

webdunia
webdunia
webdunia
webdunia

ಅಧಿಕಾರಿಗಳ ವರ್ತನೆಗೆ ಬೇಸತ್ತು ತಾನೇ ರಸ್ತೆ ನಿರ್ಮಿಸಲು ಮುಂದಾದ ಸಚಿವ!

ಅಧಿಕಾರಿಗಳ ವರ್ತನೆಗೆ ಬೇಸತ್ತು ತಾನೇ ರಸ್ತೆ ನಿರ್ಮಿಸಲು ಮುಂದಾದ ಸಚಿವ!
ಲಕ್ನೋ , ಸೋಮವಾರ, 25 ಜೂನ್ 2018 (09:01 IST)
ಲಕ್ನೋ: ಸಾಮಾನ್ಯವಾಗಿ ಜನಪ್ರತಿನಿಧಿಗಳ ಬೇಜವಾಬ್ಧಾರಿಯಿಂದ ಬೇಸತ್ತು ಜನ ಸಾಮಾನ್ಯರು ತಾವೇ ರಸ್ತೆ ಮತ್ತಿತರ ಕಾಮಗಾರಿಗೆ ಮುಂದಾಗುವ ಘಟನೆಗಳನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಸಚಿವರೊಬ್ಬರು ಇದೇ ಕೆಲಸ ಮಾಡಿದ್ದಾರೆ.

ಅಧಿಕಾರಿಗಳ ಬೇಜವಬ್ಧಾರಿಗೆ ಬೇಸತ್ತು ಉತ್ತರ ಪ್ರದೇಶದ ಸಚಿವ ಪ್ರಕಾಶ್ ರಾಜ್ ಭರ್ ತಾವೇ ರಸ್ತೆ ರಿಪೇರಿ ಮಾಡಿದ ಘಟನೆ ನಡೆದಿದೆ. ಅಂದ ಹಾಗೆ ಇದು ನಡೆದಿರುವುದು ವಾರಣಾಸಿ ಗ್ರಾಮದ ಸಚಿವರ ಮನೆ ಹತ್ತಿರದಲ್ಲಿ.

ಸಚಿವರ ಮನೆ ಪಕ್ಕದಲ್ಲೇ ಇರುವ ರಸ್ತೆ ಕೆಟ್ಟು ತುಂಬಾ ದಿನಗಳಾಗಿತ್ತು. ಇದನ್ನು ರಿಪೇರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಮಾಡಿರಲಿಲ್ಲ. ಹೀಗಾಗಿ ಬೇಸತ್ತ ಸಚಿವರು ತಾವೇ ಗುದ್ದಲಿ ತೆಗೆದುಕೊಂಡು ರಸ್ತೆ ರಿಪೇರಿಗೆ ಮುಂದಾದರು. ಸಚಿವರ ಕೆಲಸ ನೋಡಿ ಸ್ಥಳೀಯರೂ ಅವರಿಗೆ ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2019 ರ ಲೋಕಸಭೆ ಚುನಾವಣೆಗೆ ರೆಡಿಯಾಗ್ತಿದೆ ಬಿಜೆಪಿ ಮಾಸ್ಟರ್ ಪ್ಲ್ಯಾನ್