Select Your Language

Notifications

webdunia
webdunia
webdunia
webdunia

ದೇವೇಗೌಡರು ಮತ್ತೆ ಪಿಎಂ ಆಗಲು ಸಾಧ್ಯವೇ ಇಲ್ಲ ಎಂದವರಾರು?

ದೇವೇಗೌಡರು ಮತ್ತೆ ಪಿಎಂ ಆಗಲು ಸಾಧ್ಯವೇ ಇಲ್ಲ ಎಂದವರಾರು?
ಮಂಡ್ಯ , ಸೋಮವಾರ, 9 ಜುಲೈ 2018 (18:58 IST)
ದೇವೇಗೌಡರು ಮತ್ತೆ ಪ್ರಧಾನಿ ಆಗಲು ಸಾಧ್ಯವೇ ಇಲ್ಲ. 2019ರಲ್ಲೂ ನರೇಂದ್ರ ಮೋದಿ ದೇಶದ ಪ್ರಧಾನಿ ಆಗ್ತಾರೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಒಂದಾದ್ರು ಕೂಡ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸಂಸತ್ ಸ್ಥಾನ ಗೆಲ್ಲುತ್ತೆ. ಸಮ್ಮಿಶ್ರ ಸರ್ಕಾರದ ಬಜೆಟ್ ಖಂಡಿಸ್ತೇವೆ. ಬಜೆಟ್ ನಲ್ಲಿ ಪ್ರಮುಖವಾಗಿ ಪ್ರಾದೇಶಿಕ ಅಸಮಾತೋಲನೆ ಕಾಣ್ತಿದೆ. ಇದು ರಾಜ್ಯ ಬಜೆಟ್ ಅಲ್ಲ‌. ಉತ್ತರ ಕರ್ನಾಟಕ, ಕರಾವಳಿ ಹಳೆ ಮೈಸೂರು, ಮಲೆನಾಡೆಂದು ವಿಂಗಡಿಸಲಾಗಿದೆ.

ಅಣ್ಣ-ತಮ್ಮಂದಿರ ಬಜೆಟ್ ನಲ್ಲಿ ಎಲ್ಲಾ ಜಿಲ್ಲೆಯನ್ನು ಕಡೆಗಣಿಸಲಾಗಿದೆ.  ಕೇವಲ ಮೂರ್ನಾಲ್ಕು ಜಿಲ್ಲೆಗೆ ಸೀಮಿತವಾಗಿದೆ. ಬಿಜೆಪಿ ಪ್ರಾಬಲ್ಯ ಇರುವ ಕಡೆ ಬಜೆಟ್ ನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಸಾಲ ಮನ್ನಾ ಸಮರ್ಪಕವಾಗಿ ಆಗಿಲ್ಲ. ಕುಮಾರಸ್ವಾಮಿ ಸಿಎಂ ಆದ ಮೇಲೂ ರೈತರ ಆತ್ಮಹತ್ಯೆ ನಿಂತಿಲ್ಲ. ನಾನು ಸಂಸತ್ ನಲ್ಲಿದ್ದಾಗ ಶಾಸಕನಾಗಿ ಬಂದೆ ಮತ್ತೆ ಸಂಸತ್ ಗೆ ಹೋಗಲ್ಲ. ಕಡಿಮೆ ಸಂಖ್ಯೆ ಗೆದ್ದಿರುವ ಜೆಡಿಎಸ್ ನವ್ರು ಸಿಎಂ ಆಗಿದ್ದಾರೆ. ಹೆಚ್ಚು ಗೆದ್ದಿರೋ ನಾವು ವಿರೋಧ ಪಕ್ಷ ಸ್ಥಾನದಲ್ಲಿದ್ದೇವೆ. ಮತ್ತೆ ನಾವು ಸಿಎಂ ಆಗೇ ಆಗುತ್ತೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ಚರ್ಮ, ಜಿಂಕೆ ಕೊಂಬು ಸಾಗಿಸುತ್ತಿದ್ದ ಕಾಡುಕಳ್ಳರ ಬಂಧನ