Select Your Language

Notifications

webdunia
webdunia
webdunia
webdunia

ಚಿರತೆ ಚರ್ಮ, ಜಿಂಕೆ ಕೊಂಬು ಸಾಗಿಸುತ್ತಿದ್ದ ಕಾಡುಕಳ್ಳರ ಬಂಧನ

ಚಿರತೆ ಚರ್ಮ, ಜಿಂಕೆ ಕೊಂಬು ಸಾಗಿಸುತ್ತಿದ್ದ  ಕಾಡುಕಳ್ಳರ ಬಂಧನ
ಚಿಕ್ಕಮಗಳೂರು , ಸೋಮವಾರ, 9 ಜುಲೈ 2018 (18:50 IST)
ಚಿರತೆ ಚರ್ಮ, ಜಿಂಕೆ ಕೊಂಬು, ಕಾಡೆಮ್ಮೆ ಕೊಂಬು ಸಾಗಿಸುತ್ತಿದ್ದ ಐವರು ಕಾಡುಕಳ್ಳರ ಬಂಧನ ಮಾಡಲಾಗಿದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿರತೆ ಚರ್ಮ, ಆನೆ ದಂತ, ಜಿಂಕೆ ಕೋಡು ಮತ್ತು ಕಾಡೆಮ್ಮೆ ಕೊಂಬು ವಶ ಪಡಿಸಿಕೊಳ್ಳಲಾಗಿದೆ.

ತರೀಕೆರೆ ಪಟ್ಟಣದಲ್ಲಿ ಕಾರಿನಲ್ಲಿ ಸಾಗಿಸುವಾಗ ದಾಳಿ ನಡೆಸಿ ಬಂಧನ ಮಾಡಲಾಗಿದೆ. ದಕ್ಷಿಣ ಕನ್ನಡ ಮೂಲದ ಅಜೀಜ್ ಬೆಂಜಾಲ್, ಅಹಮ್ಮದ್ ಕುಹ್ನಿ ಹಾಗೂ ತರೀಕೆರೆ ಮೂಲದ ಮಂಜನಾಯ್ಕ, ಕುಮಾರ್ ನಾಯ್ಕ, ನಿಂಗ್ಯಾ ನಾಯ್ಕ ಬಂಧಿತ ಆರೋಪಿಗಳು. ಲಕ್ಕವಳ್ಳಿ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲು ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಶಂಕೆ?