Select Your Language

Notifications

webdunia
webdunia
webdunia
webdunia

ಬಸ್ ಪ್ರಯಾಣ ದರ ಶೇ. 18ರಷ್ಟು ಏರಿಕೆ: ಗ್ರಾಹಕರ ಜೇಬಿಗೆ ಬಿತ್ತು ಹೊರೆ

ಬಸ್ ಪ್ರಯಾಣ ದರ ಶೇ. 18ರಷ್ಟು ಏರಿಕೆ: ಗ್ರಾಹಕರ ಜೇಬಿಗೆ ಬಿತ್ತು ಹೊರೆ
ಮಂಡ್ಯ , ಮಂಗಳವಾರ, 11 ಸೆಪ್ಟಂಬರ್ 2018 (19:38 IST)
ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ದರದಲ್ಲಿ ಶೇ.18ರಷ್ಟು  ಏರಿಕೆ ಮಾಡಿ ಆಗಿದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಖಡಕ್ ಆಗಿ ಹೇಳಿದ್ದಾರೆ. ಆ ಮೂಲಕ ಬಡ ಪ್ರಯಾಣಿಕರ ಜೇಬಿಗೆ ಭರ್ಜರಿ ಕತ್ತರಿ ಬಿದ್ದಂತಾಗಿದೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶೇ. 18ರಷ್ಟು ಪ್ರಯಾಣ ದರದಲ್ಲಿ ಏರಿಕೆ ಮಾಡಿ ಆಗಿದೆ. ಈಗ ಕಡಿಮೆ ಮಾಡಲು ಆಗಲ್ಲ. ಪೆಟ್ರೋಲ್ ದರ ಏರಿಕೆ ಮಾಡಿರುವುದರಿಂದ ಅನಿವಾರ್ಯವಾಗಿ ಬಸ್ ದರ ಹೆಚ್ಚಳ ಮಾಡಿದ್ದೇವೆ. ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಬಸ್ ಎರ ಏರಿಕೆ ವಿಚಾರವನ್ನ ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ತಮ್ಮಣ್ಣ, ಅವ್ರು ದೊಡ್ಡ ಲೀಡರ್ ಬಸ್ ದರ ಏರಿಕೆಯನ್ನ ಟೀಕೆ ಮಾಡಲಿ. ಅವರ ಮಟ್ಟಕ್ಕೆ ನಾವು ಬೆಳೆಯಲು ಸಾಧ್ಯವಿಲ್ಲ.

ಬಸ್ ದರ ಏರಿಕೆಯನ್ನು ಕಾಂಗ್ರೆಸ್ಸಿಗರು ಟೀಕೆ ಮಾಡಿದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಬಸ್ ದರ ಏರಿಕೆ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಿತ್ರ ಪಕ್ಷ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದ್ರು.

 


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ಖತರ್ನಾಕ್ ಕಳ್ಳನ ಬಂಧನ