Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಕುಲಕರ್ಣಿಯಿಂದ ಸಂತ್ರಸ್ತರಿಗೆ ನೆರವು

ಮಾಜಿ ಸಚಿವ ಕುಲಕರ್ಣಿಯಿಂದ ಸಂತ್ರಸ್ತರಿಗೆ ನೆರವು
ಧಾರವಾಡ , ಮಂಗಳವಾರ, 21 ಆಗಸ್ಟ್ 2018 (17:14 IST)
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನೆರೆ ಹಾವಳಿಗೆ ತತ್ತರಿಸಿದ ಜನರಿಗೆ ನೆರೆವು ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೊಡಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ ವಸ್ತುಗಳನ್ನು ಸಂಗ್ರಹಿಸಿದರು.

 ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೊಡಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ ವಸ್ತುಗಳನ್ನು ಸಂಗ್ರಹಿಸಿದರು. ಸುಮಾರು 3ಘಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿ,  ಧಾರವಾಡದ ಜಿಲ್ಲಾಧಿಕಾರಿ ಮೂಲಕ ಕೊಡಗು ಜಿಲ್ಲೆಗೆ ತಲುಪಿಸಲು ಮುಂದಾಗಿದ್ದಾರೆ.

ಹಲವಾರು ಜನರು ತಮ್ಮ ಕೈಲಾದಷ್ಟು ಸಹಾಯ ಮಾಡಿದರು. ಬಟ್ಟೆ, ಊಟ ಮತ್ತು ಅನೇಕ ಇತರೆ ಸಾಮಾಗ್ರಿಗಳನ್ನು ಜನರು ದೇಣಿಗೆಯಾಗಿ ನೀಡಿದರು. ಸಂತ್ರಸ್ಥರಿಗೆ ಸಹಾಯ ಮಾಡಲು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೊಂಡರು.



 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಆಸ್ತಿ: ಎಸಿಬಿ ಅಧಿಕಾರಿಗಳ ದಾಳಿ