Select Your Language

Notifications

webdunia
webdunia
webdunia
webdunia

ಕೊಡಗು-ಕೇರಳ ಸಂತ್ರಸ್ತರಿಗೆ ಶಾಮನೂರು ಶಿವಶಂಕರಪ್ಪ ನೆರವು

ಕೊಡಗು-ಕೇರಳ ಸಂತ್ರಸ್ತರಿಗೆ ಶಾಮನೂರು ಶಿವಶಂಕರಪ್ಪ ನೆರವು
ದಾವಣಗೆರೆ , ಭಾನುವಾರ, 19 ಆಗಸ್ಟ್ 2018 (16:25 IST)
ಮಳೆಯಿಂದ ಕೊಡುಗು ಮತ್ತು ಕೇರಳ ಅಕ್ಷರಶಃ ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆ ಕೊಡಗು ಮತ್ತು ಕೇರಳ ಸಂತ್ರಸ್ಥರಿಗೆ ದಾವಣಗೆರೆ ಸಹಕಾರ ಬ್ಯಾಂಕ್ ಒಕ್ಕೂಟದಿಂದ ಸಹಾಯ ಹಸ್ತ ಚಾಚಲಾಗಿದೆ.

ಜೊತೆಗೆ ಮಾಜಿ ಸಚಿವ, ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ವೈಯುಕ್ತಿಕ ವಾಗಿ 25 ಲಕ್ಷ ರೂಪಾಯಿ ನೆರವು ನೀಡಲು ಮುಂದಾಗಿದ್ದಾರೆ. ಒಟ್ಟು 1 ಕೋಟಿ 50 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿದ್ದಾರೆ.

ಕೊಡಗು ಸಂತ್ರಸ್ಥರಿಗೆ  ಹಾಗೂ ಕೇರಳ ಸಂತ್ರಸ್ಥರಿಗೆ ತಲಾ 1 ಕೋಟಿ  ರೂಪಾಯಿ ನೀಡಲು ಸಹಕಾರ ಬ್ಯಾಂಕ್ ಒಕ್ಕೂಟಗಳು ಶಾಸಕ ಶಾಮನೂರ ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿವೆ. ಶಾಮನೂರು ಶಿವಶಂಕರಪ್ಪ ಅವರು ವೈಯುಕ್ತಿಕ  25 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 25 ಲಕ್ಷ ರೂಪಾಯಿ ಸಹಾಯ ದೇಣಿಗೆಯನ್ನು ಪ್ರಧಾನ ಮಂತ್ರಿ ಹಾಗೂ  ರಾಜ್ಯದ ಮುಖ್ಯಮಂತ್ರಿಯವರ ಪರಿಹಾರ ನಿಧಿ ಮೂಲಕ ಸಂತ್ರಸ್ಥರಿಗೆ ನೀಡಲು ನಿರ್ಧರಿಸಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಜಲ ಪ್ರಳಯಕ್ಕೆ ಹೇಳ ಹೆಸರಿಲ್ಲದಂತಾದ ಜೋಡುಪಾಲ ಪ್ರವಾಸಿ ತಾಣ