Select Your Language

Notifications

webdunia
webdunia
webdunia
webdunia

ನಟ ಗಣೇಶ್ ಮೋಕ್ಷ ಅಗರಬತ್ತಿ ಸಂಸ್ಥೆಯ ಮೇಲೆ ಕೇಸ್ ದಾಖಲಿಸಿದ್ದು ಯಾಕೆ…?

ನಟ ಗಣೇಶ್ ಮೋಕ್ಷ ಅಗರಬತ್ತಿ ಸಂಸ್ಥೆಯ ಮೇಲೆ ಕೇಸ್ ದಾಖಲಿಸಿದ್ದು ಯಾಕೆ…?
ಬೆಂಗಳೂರು , ಮಂಗಳವಾರ, 3 ಏಪ್ರಿಲ್ 2018 (07:49 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅನುಮತಿ ಇಲ್ಲದೆ ತಮ್ಮ ಫೋಟೋವನ್ನು ಮೋಕ್ಷ ಅಗರಬತ್ತಿ ಕಂಪೆನಿಯವರು  ಬಳಸಿಕೊಂಡಿದ್ದ ಕಾರಣ ಅಗರಬತ್ತಿ ಸಂಸ್ಥೆಯ ಮೇಲೆ 75 ಲಕ್ಷ ಪರಿಹಾರ ನೀಡುವಂತೆ ಕೇಸು ದಾಖಲಿಸಿರುವ ಹಿನ್ನಲೆಯಲ್ಲಿ  ಸೋಮವಾರ ಈ ಕೇಸ್ ಬಗ್ಗೆ ವಿಚಾರಣೆ ನಡೆಸಿದ ಸಿಟಿಸಿವಿಲ್ ನ್ಯಾಯಾಲಯ ಅಂತಿಮ ತೀರ್ಪನ್ನು ಹೊರಹಾಕಿದೆ.


2008 ರಲ್ಲಿ ಚೆಲುವಿನ ಚಿತ್ತಾರ ಚಿತ್ರದ ಪ್ರಚಾರಕ್ಕಾಗಿ ಎಸ್. ನಾರಾಯಣ್ ಅವರು ಮೋಕ್ಷ ಅಗರಬತ್ತಿ ಕಂಪೆನಿಯೊಂದಿಗೆ 3 ತಿಂಗಳ ಅವಧಿಗೆ ಒಪ್ಪಂದ  ಮಾಡಿಕೊಂಡಿದ್ದರು. ಆದರೆ ಈ ಕಂಪೆನಿಯವರು ಅವಧಿ ಮುಗಿದರೂ ಕೂಡ ಗಣೇಶ್ ಅವರ ಅನುಮತಿ ಇಲ್ಲದೆ ಅವರ ಫೋಟೋವನ್ನುಬಳಸಿಕೊಂಡಿದ್ದರು. ಆದ ಕಾರಣ ಗಣೇಶ್ ಅವರು ಈ ಬಗ್ಗೆ ಅಗರಬತ್ತಿ ಸಂಸ್ಥೆಯ ಮೇಲೆ ಕೇಸು ದಾಖಲಿಸಿದ್ದರು.


ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಸೋಮವಾರ ಪ್ರಕಟವಾಗಿದ್ದು, ಇದರ ಪ್ರಕಾರ ಗಣೇಶ್‌ ಅವರಿಗೆ 75 ಲಕ್ಷ ಪರಿಹಾರ ನೀಡುವಂತೆ ಮೋಕ್ಷ್ ಅಗರಬತ್ತಿ ಕಂಪನಿಗೆ ಸಿವಿಲ್ ಕೋರ್ಟ್ ಆದೇಶ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ತೇಜ್ ಅಭಿನಯಿಸಿದ್ದ ‘ರಂಗಸ್ಥಲಂ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ…?