Select Your Language

Notifications

webdunia
webdunia
webdunia
webdunia

ನಿರ್ದೇಶಕ ಓಂ ಪ್ರಕಾಶ್ ರಾವ್ ರವರ ‘ತ್ರಿವಿಕ್ರಮ’ ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ವಿಲನ್ ಆಗಲಿದ್ದಾರಂತೆ; ಯಾರು ಗೊತ್ತಾ ಆ ನಟ

ನಿರ್ದೇಶಕ ಓಂ ಪ್ರಕಾಶ್ ರಾವ್ ರವರ  ‘ತ್ರಿವಿಕ್ರಮ’ ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ವಿಲನ್ ಆಗಲಿದ್ದಾರಂತೆ; ಯಾರು ಗೊತ್ತಾ ಆ ನಟ
ಬೆಂಗಳೂರು , ಮಂಗಳವಾರ, 3 ಏಪ್ರಿಲ್ 2018 (07:28 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಅವರು ನಟಿಸಲಿರುವ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ನಿರ್ದೇಶನದಲ್ಲಿ ಮೂಡಿಬರಲಿರುವ  ‘ತ್ರಿವಿಕ್ರಮ' ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಇದೀಗ ಈ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟರೊಬ್ಬರು ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.


ಹೌದು. ಹಿಂದೊಮ್ಮೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ನಟ ಶಿವರಾಜಕುಮಾರ್ ಅವರನ್ನು ಹಾಕಿಕೊಂಡು ‘ತ್ರಿವಿಕ್ರಮ’ ಎಂಬ ಚಿತ್ರವೊಂದನ್ನು ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಈ "ತ್ರಿವಿಕ್ರಮ' ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಆಗಿ ನಟಿಸುತ್ತಾರಂತೆ. ಈ ಮಾತನ್ನು ಸ್ವತಃ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.


ಈಗಾಗಲೇ ಸಂಜಯ್ ದತ್ ಜೊತೆ ಮಾತುಕತೆ ಕೂಡ ನಡೆದಿದೆಯಂತೆ. ಈ ಚಿತ್ರ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡದಲ್ಲಿ ಶಿವಣ್ಣ ಹಾಗೂ ಇತರ ಭಾಷೆಗಳಲ್ಲಿ ಬೇರೆ ನಾಯಕರು ಇರಲಿದ್ದಾರಂತೆ. ಆದರೆ ಎಲ್ಲಾ ಐದು ಭಾಷೆಗಳಲ್ಲೂ ಸಂಜಯ್ ದತ್ ಅವರೇ ವಿಲನ್ ಆಗಿ ನಟಿಸಲಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ವಿಷಯದಲ್ಲಿ ಇದೆಂತಹ ಎಡವಟ್ಟು ಮಾಡಿಕೊಂಡ್ರು ಅಮಿತಾಬ್ ಬಚ್ಚನ್ !