Select Your Language

Notifications

webdunia
webdunia
webdunia
webdunia

ಅತ್ತಿಗೆ ಸ್ಪಂದನಾರನ್ನು ನೆನೆದು ಭಾವುಕರಾದ ನಟ ಶ್ರೀಮುರಳಿ

ಅತ್ತಿಗೆ ಸ್ಪಂದನಾರನ್ನು ನೆನೆದು ಭಾವುಕರಾದ ನಟ ಶ್ರೀಮುರಳಿ
ಬೆಂಗಳೂರು , ಗುರುವಾರ, 7 ಡಿಸೆಂಬರ್ 2023 (09:32 IST)
ಬೆಂಗಳೂರು: ನಟ ಶ್ರೀಮುರಳಿ ಇತ್ತೀಚೆಗಷ್ಟೇ ಅಗಲಿದ್ದ ತಮ್ಮ ಅತ್ತಿಗೆ ಸ್ಪಂದನಾ ವಿಜಯ್ ನೆನೆದು ಭಾವುಕ ಸಾಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸ್ಪಂದನಾ ಅಗಲಿ ನಾಲ್ಕು ತಿಂಗಳಾದ ಹಿನ್ನಲೆಯಲ್ಲಿ ಶ್ರೀಮುರಳಿ ಅತ್ತಿಗೆಯ ಫೋಟೋ ಜೊತೆಗೆ ನೀವು ನಮ್ಮನ್ನಗಲಿ ನಾಲ್ಕು ತಿಂಗಳಾಗಿರಬಹುದು. ಆದರೂ ಈ ಸತ್ಯವನ್ನು ಈಗಲೂ ನಂಬಲು ಹಾಗೂ ಒಪ್ಪಿಕೊಳ್ಳಲು ಇಷ್ಟವಿಲ್ಲ. ಯಾವತ್ತೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಶ್ರೀಮುರಳಿ ಅಣ್ಣ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಾಲ್ಕು ತಿಂಗಳ ಹಿಂದೆ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ಹಠಾತ್ ನಿಧನರಾಗಿದ್ದರು. ಅವರ ಸಾವು ವಿಜಯ್ ಕುಟುಂಬಕ್ಕೆ ತೀವ್ರ ಆಘಾತ ತಂದಿತ್ತು.

ವಿಜಯ್ ರಾಘವೇಂದ್ರ ಕುಟುಂಬದ ಶಕ್ತಿಯಾಗಿದ್ದ ಸ್ಪಂದನಾರನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲು ಈಗಲೂ ಕುಟುಂಬ ಸದಸ್ಯರಿಗೆ ಸಾಧ‍್ಯವಾಗುತ್ತಿಲ್ಲ. ಇದೀಗ ಅತ್ತಿಗೆಯ ನಿಧನದ ನಂತರ ಮೊದಲ ಬಾರಿಗೆ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನಲ್ಲಿ ಕನ್ನಡ ಹೀರೋಗೆ ರಶ್ಮಿಕಾ ಮಂದಣ್ಣ ಹೀರೋಯಿನ್