Select Your Language

Notifications

webdunia
webdunia
webdunia
webdunia

ರಾಮನವಮಿ ವಿಶೇಷ: 'ಬೊಂಬಾಟ್ ಬೋಜನ'ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬ ಮಾತು

ರಾಮನವಮಿ ವಿಶೇಷ: 'ಬೊಂಬಾಟ್ ಬೋಜನ'ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬ ಮಾತು

Sampriya

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (15:00 IST)
Photo Courtesy X
ಬೆಂಗಳೂರು: ನಾಳೆ ದೇಶದಾದ್ಯಂತ ರಾಮನವಮಿ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.  

ಇನ್ನೂ ರಾಮನವಮಿ ವಿಶೇಷ ಎಂಬಂತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿಹಿಕಹಿ ಚಂದ್ರು ಅವರು ನಡೆಸಿ ಕೊಡುವ ಬೊಂಬಾಟ್ ಭೋಜನದಲ್ಲಿ ರಾಮಲಲ್ಲಾ ವಿಗ್ರಹವನ್ನು ಕೆತ್ತಬೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕುಟುಂಬ ಭಾಗಿಯಾಗಲಿದೆ.

ಈಗಾಗಲೇ ಸ್ಟಾರ್ ಸುವರ್ಣ ವಾಹಿನಿ ಫ್ರೋಮೋ ಬಿಟ್ಟಿದೆ. ಇನ್ನೂ ಬೊಂಬಾಟ್ ಭೋಜನ ಕಾರ್ಯಕ್ರಮವು ಸಾವಿರ ಸಂಚಿಕೆಗಳ ಸಂಭ್ರಮವನ್ನು ಆಚರಿಸುತ್ತಿದೆ. ಈ ಹಿನ್ನೆಲೆ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಶಿಲ್ಪಿ  ಕನ್ನಡದ ಹೆಮ್ಮೆಯ ಅರುಣ್ ಯೋಗಿರಾಜ್ ಕುಟುಂಬ ಈ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಮೊದಲ ಬಾರಿ ಎಂಬಂತೆ ಖಾಸಗಿ ವಾಹಿನಿಯಲ್ಲಿ ಇವರು ಪಾಲ್ಗೊಳ್ಳತ್ತಿದ್ದು ವೀಕ್ಷಕರಿಗೆ ಕುತೂಹಲ ಹೆಚ್ಚಿದೆ.

ಅರುಣ್ ಯೋಗಿರಾಜ್ ಅವರಿಗೆ ಸಿಹಿಕಹಿ ಚಂದ್ರು ಅವರು ಸನ್ಮಾನ ಮಾಡಿದ್ದಾರೆ. ಇನ್ನು ಗಾಯಕ ಚಿನ್ಮಯಿ ಅತ್ರೇಯಸ್ ಅವರು ಪಾಲ್ಗೊಂಡು ರಾಮನ ಕುರಿತು ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಈ ಸಂಚಿಕೆ ನಾಳೆ ಮಧ್ಯಾಹ್ನ 12ಗಂಟೆಗೆ ಸ್ಟಾರ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಾರಕೀಶ್ ಕಷ್ಟಕ್ಕೆ ಬಿದ್ದಾಗಲೆಲ್ಲಾ ಸಹಾಯ ಮಾಡಿದ್ದ ಸಾಹಸಸಿಂಹ ವಿಷ್ಣುವರ್ಧನ್