Select Your Language

Notifications

webdunia
webdunia
webdunia
webdunia

ಮೈಸೂರಿನ ಅರುಣ್ ಯೋಗಿ ಕೆತ್ತಿದ ರಾಮಲಲ್ಲಾನೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ

arun yogiraj

Krishnaveni K

ಅಯೋಧ್ಯೆ , ಸೋಮವಾರ, 15 ಜನವರಿ 2024 (17:48 IST)
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾನ ಮೂರ್ತಿ ಯಾವುದೆಂದು ಫೈನಲ್ ಆಗಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿ ಕೆತ್ತಿದ 5 ವರ್ಷದ ಬಾಲರಾಮನ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಲು ಫೈನಲ್ ಮಾಡಲಾಗಿದೆ. ಇದೀಗ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಇದಕ್ಕೆ ಮೊದಲು ಮೈಸೂರಿನ ಅರುಣ್ ಯೋಗಿರಾಜ್ ಮಾಡಿದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬಹುದು ಎಂದು ಸುದ್ದಿಯಿತ್ತು. ಅದನ್ನೀಗ ಅಧಿಕೃತಗೊಳಿಸಲಾಗಿದೆ. ಇದೀಗ ರಾಮಜನ್ಮಭೂಮಿ ಟ್ರಸ್ಟ್ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ.

ಇದು ಕನ್ನಡಿಗರಿಗೇ ಹೆಮ್ಮೆಯ ಸಂಗತಿಯಾಗಿದೆ. ಅರುಣ್ ಯೋಗಿ ಕೆತ್ತಿರುವ ಈ ವಿಗ್ರಹ 150 ರಿಂದ 200 ಕೆ.ಜಿ. ತೂಕದ್ದಾಗಿದೆ. ಇದೀಗ ಅರುಣ್ ಯೋಗಿರಾಜ್ ಗೆ ಎಲ್ಲೆಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿ ದಿನ ಗೋವುಗಳ ಜೊತೆ ಕಾಲ ಕಳೆದ ಪ್ರಧಾನಿ ಮೋದಿ