Select Your Language

Notifications

webdunia
webdunia
webdunia
webdunia

Ajith Kumar: ನಟ ಅಜಿತ್ ಕುಮಾರ್ ಗೆ ಶಸ್ತ್ರಚಿಕಿತ್ಸೆ: ಹೇಳಿಕೆ ಬಿಡುಗಡೆ ಮಾಡಿದ ವಕ್ತಾರರು

Ajith Kumar

Krishnaveni K

ಚೆನ್ನೈ , ಶನಿವಾರ, 9 ಮಾರ್ಚ್ 2024 (09:40 IST)
ಚೆನ್ನೈ: ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಅವರ ಆರೋಗ್ಯ ಸ್ಥಿತಿ ಬಗ್ಗೆ ನಾನಾ ಊಹಾಪೋಹಗಳು ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಆಸ್ಪತ್ರೆ ಮೂಲಗಳಿಂದಲೇ ಸ್ಪಷ್ಟನೆ ನೀಡುತ್ತಿದೆ.

ಅಜಿತ್ ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂಬಿತ್ಯಾದಿ ರೂಮರ್ ಹರಿದಾಡುತ್ತಿತ್ತು.  ಈ ಹಿನ್ನಲೆಯಲ್ಲಿ ಅಜಿತ್ ಪರ ಅವರ ವಕ್ತಾರರೇ ಮಾಧ‍್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಎಲ್ಲಾ ರೂಮರ್ ಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಅಜಿತ್ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿದ್ದಾರೆ.

ಅಜಿತ್ ಅವರ ಮೆದುಳಿನಲ್ಲಿ ಸಮಸ್ಯೆಯಾಗಿದೆ, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದು ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ‘ಅಜಿತ್ ಗುರುವಾರ ಆಸ್ಪತ್ರೆಗೆ ದಾಖಲಾದರು. ಅವರ ಕಿವಿಯಿಂದ ಮೆದುಳಿಗೆ ಕನೆಕ್ಟ್ ಆಗುವ ನರದಲ್ಲಿ ಸಣ್ಣ ಊತವಾಗಿತ್ತು. ಇದನ್ನು ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯಿಂದ ಸರಿಪಡಿಸಲಾಗಿದೆ. ಸದ್ಯಕ್ಕೆ ಅಜಿತ್ ಆರೋಗ್ಯವಾಗಿದ್ದಾರೆ. ಐಸಿಯುವಿನಿಂದ ವಾರ್ಡ್ ಗೆ ನಡೆದೇ ಹೋಗಿದ್ದಾರೆ’ ಎಂದು ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಸದ್ಯಕ್ಕೆ ಅಜಿತ್ ವಿದಾ ಮುಯುರಾಚಿ ಸಿನಿಮಾ ಶೂಟಿಂಗ್ ಗಾಗಿ ವಿದೇಶದಲ್ಲಿದ್ದರು. ಆದರೆ ಇತ್ತೀಚೆಗೆ ಮಗನ ಹುಟ್ಟುಹಬ್ಬ ಆಚರಿಸಲು ಭಾರತಕ್ಕೆ ಬಂದಿದ್ದರು. ಈ ವೇಳೆ ಆರೋಗ್ಯ ಸಮಸ್ಯೆಯಾಗಿದೆ. ಗುಣಮುಖರಾದ ತಕ್ಷಣ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕೆ: ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರಾ ಶಿವಣ್ಣ