Select Your Language

Notifications

webdunia
webdunia
webdunia
webdunia

ಪೂಜೆಯಲ್ಲಿ ಪಾಲ್ಗೊಳ್ಳಲು ಕರಾವಳಿಗೆ ಬಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಪೂಜೆಯಲ್ಲಿ ಪಾಲ್ಗೊಳ್ಳಲು ಕರಾವಳಿಗೆ ಬಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Sampriya

ಬೆಂಗಳೂರು , ಶುಕ್ರವಾರ, 26 ಏಪ್ರಿಲ್ 2024 (20:21 IST)
photo Courtesy Instagram
ಬೆಂಗಳೂರು: ಕರಾವಳಿ ದೈವ ದೇವರನ್ನು ಅಪಾರವಾಗಿ ಆರಾಧಿಸುವ ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು  ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ  ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರ ಮಹೋತ್ಸವಕ್ಕೆ ಮಗನ ಜತೆ ಕುಟುಂಬ ಸಮೇತರಾಗಿ ಆಗಮಿಸಿ, ಪಾಲ್ಗೊಂಡರು.

ತಮ್ಮ ದೇಹಸಿರಿಯ ಮೂಲಕ ಸಿನಿ ಪ್ರಿಯರ ಮನಗೆದ್ದಿರುವ ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲವೂ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಇನ್ನೂ ಕರಾವಳಿ ಬಗ್ಗೆ ತುಂಬಾನೇ ಹೆಮ್ಮೆ ವ್ಯಕ್ತಪಡಿಸುವ ಶಿಲ್ಪಾ ಅವರು ಇಲ್ಲಿನ ಆಹಾರ, ಆಚಾರ ವಿಚಾರಗಳನ್ನು ಕೆಲವೊಂದು ವೇದಿಕೆಯಲ್ಲಿ ಹೆಮ್ಮೆಯಿಂದ ವ್ಯಕ್ತಪಡಿಸುತ್ತಾರೆ.

ತುಳುವನ್ನು ನಿರರ್ಗಳವಾಗಿ ಮಾತನಾಡುವ ಅವರು ಕರಾವಳಿಯ ಪೆಲಕಾಯಿ ಗಟ್ಟಿಯ ಖಾದ್ಯವನ್ನು ಮಾಡಿ ತುಳುವರ ಮನಸ್ಸನ್ನು ಕದ್ದಿದ್ದರು.

ಮಾಡೆಲಿಂಗ್ ಕ್ಷೇತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ ಈಕೆ 1994ರಲ್ಲಿ ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆದ ‘ಆಗ್‌’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು. ಕನ್ನಡದ ಖ್ಯಾತ ನಟರೊಂದಿಗೆ ನಟಿಸುವ ಮೂಲಕ ಚಂದನವನದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. 2009ರಲ್ಲಿ ಉದ್ಯಮಿ ರಾಜ್‌ ಕುಂದ್ರಾ ಮದುವೆಯಾಗಿರುವ ಶಿಲ್ಪಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನಲ್ಲಿ ಮಾತನಾಡಿ ಮತದಾರರನ್ನು ಓಲೈಸಲು ಹೋದ ಶಿವಣ್ಣಗೆ ಗುಮ್ಮಿದ ನೆಟ್ಟಿಗರು