Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಎಚ್ಚರಿಕೆಯಿಂದಿರಿ: ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಇಸ್ರೇಲ್

ಭಾರತದಲ್ಲಿ ಎಚ್ಚರಿಕೆಯಿಂದಿರಿ: ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಇಸ್ರೇಲ್
ನವದೆಹಲಿ , ಬುಧವಾರ, 27 ಡಿಸೆಂಬರ್ 2023 (12:05 IST)
ನವದೆಹಲಿ: ಭಾರತದಲ್ಲಿ ಸಾರ್ವಜನಿಕವಾಗಿ ಓಡಾಡುವಾಗ ಎಚ್ಚರಿಕೆಯಿಂದಿರಿ ಎಂದು ತನ್ನ ನಾಗರಿಕರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ.

ನಿನ್ನೆ ನವದೆಹಲಿಯಲ್ಲಿ ಇ‍ಸ್ರೇಲ್ ರಾಯಭಾರ ಕಚೇರಿಯಲ್ಲಿ ನಿಗೂಢ ಸ್ಪೋಟ ಸಂಭವಿಸಿದ ಬೆನ್ನಲ್ಲೇ ಇಸ್ರೇಲ್ ಭಾರತದಲ್ಲಿರುವ ತನ್ನ ನಾಗರಿಕರಿಗೆ ಈ ರೀತಿ ಎಚ್ಚರಿಕೆ ನೀಡಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ದೆಹಲಿ ಪೊಲೀಸರು, ಬಾಂಬ್ ನಿಸ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಇದರ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ, ಗುಂಪು ಗುಂಪಾಗಿರುವ ಸ್ಥಳಗಳಲ್ಲಿ, ಮಾಲ್-ಮಾರ್ಕೆಟ್ ಎಂದು ಓಡಾಡಬೇಡಿ ಎಂದು ಇಸ್ರೇಲ್ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ನಿನ್ನೆ ನಡೆದ ಸ್ಪೋಟದ ಬಗ್ಗೆ ತನಿಖೆ ಮುಂದುವರಿದಿದೆ. ಆದರೆ ಈ ಸ್ಪೋಟದಿಂದಾಗಿ ಯಾರಿಗೂ, ಯಾವುದೇ ಹಾನಿಯಾಗಿಲ್ಲ ಎಂಬುದೇ ಸಮಧಾನಕರ ಅಂಶ.

Share this Story:

Follow Webdunia kannada

ಮುಂದಿನ ಸುದ್ದಿ

WFI ವಿವಾದ: ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ