Select Your Language

Notifications

webdunia
webdunia
webdunia
webdunia

ಬಿಎಸ್ ಎಫ್ ಯೋಧನನ್ನು ಕೊಂದಿದ್ದ ನಾವಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವರಸೆ

ಬಿಎಸ್ ಎಫ್ ಯೋಧನನ್ನು ಕೊಂದಿದ್ದ ನಾವಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವರಸೆ
ಇಸ್ಲಾಮಾಬಾದ್ , ಶನಿವಾರ, 22 ಸೆಪ್ಟಂಬರ್ 2018 (09:51 IST)
ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ಮೇಲೆ ಭಾರತದ ಜತೆಗಿನ ಆ ದೇಶದ ದೃಷ್ಟಿಕೋನ ಬದಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೆಲ್ಲಾ ಈಗ ಸುಳ್ಳಾಗಿದೆ.

ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ಗಡಿಯಲ್ಲಿ ಯೋಧ ನರೇಂದ್ರ ಕುಮಾರ್ ನನ್ನು ಪಾಕ್ ಯೋಧರು ಕತ್ತು ಸೀಳಿ, ಕಣ್ಣು ಕಿತ್ತು, ಗುಂಡು ಹಾರಿಸಿ ಪೈಶಾಚಿಕವಾಗಿ ಕೊಲೆ ಮಾಡಿದ್ದರು. ಆದರೆ ಈ ಹತ್ಯೆ ಮಾಡಿದ್ದು ನಾವಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಳೇ ನಾಯಕರಂತೆ ವರಸೆ ತೆಗೆದಿದ್ದಾರೆ.

ಉಭಯ ದೇಶಗಳ ನಡುವಿನ ವಿದೇಶಾಂಗ ಸಚಿವರ ಮಾತುಕತೆಗೆ ಆಹ್ವಾನಿಸಿ ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಪತ್ರ ಬರೆದಿದ್ದರು. ಇದನ್ನು ಭಾರತ ತಿರಸ್ಕರಿಸಿದ ಬೆನ್ನಲ್ಲೇ ಇಮ್ರಾನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಭಾರತ ಈ ಮಾತುಕತೆ ತಿರಸ್ಕರಿಸುವ ಮೂಲಕ ಮಹತ್ವದ ಅವಕಾಶವೊಂದನ್ನು ಕಳೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿಗೆ ಶೃಂಗೇರಿ ಶಾರದಾಂಬೆ ಒಳ್ಳೆ ಬುದ್ಧಿ ಕೊಡಲಪ್ಪಾ..! ಬಿಜೆಪಿ ಟಾಂಗ್