Select Your Language

Notifications

webdunia
webdunia
webdunia
webdunia

ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ಮತ್ತೊಂದು ವಿವಾದ

Shreyas Iyer

Krishnaveni K

ಕೋಲ್ಕೊತ್ತಾ , ಸೋಮವಾರ, 18 ಮಾರ್ಚ್ 2024 (12:39 IST)
ಕೋಲ್ಕೊತ್ತಾ: ಬೆನ್ನು ನೋವಿಗೊಳಗಾಗಿದ್ದಾರೆ ಎನ್ನಲಾದ ಶ್ರೇಯಸ್ ಅಯ್ಯರ್ ಇದೀಗ ಐಪಿಎಲ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಕೂಡಿಕೊಂಡಿದ್ದು ಮತ್ತೆ ವಿವಾದಕ್ಕೆ ಕಾರಣವಾಗಿದೆ.

ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದಾಗಿ ಕೊನೆಯ ಎರಡು ದಿನ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಅದಾದ ಬಳಿಕ ಅವರು ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ವದಂತಿಯಿತ್ತು. ಆದರೆ ಕೆಕೆಆರ್ ತಂಡ ಬಳಿಕ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.

ಆದರೆ ಇದೀಗ ಶ್ರೇಯಸ್ ಅಯ್ಯರ್ ಎಲ್ಲಾ ಆಟಗಾರರಂತೆ ಕೆಕೆಆರ್ ತಂಡವನ್ನು ಕೂಡಿಕೊಂಡಿದ್ದು, ಅವರ ಗಾಯದ ಬಗ್ಗೆ ಮತ್ತೆ ಪ್ರಶ್ನೆ ಮೂಡಿದೆ. ನಿಜವಾಗಿಯೂ ಗಾಯವಾಗಿದ್ದರೆ ಈಗಲೇ ಐಪಿಎಲ್ ನ ಆರಂಭಿಕ ಪಂದ್ಯಗಲ್ಲಿ ಹೇಗೆ ಆಡಲಿದ್ದಾರೆ ಎಂದು ಪ್ರಶ್ನೆ ಮೂಡಿದೆ.

ಈ ಮೊದಲು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಬೆನ್ನು ನೋವಿಗೊಳಗಾಗಿದ್ದ ಶ್ರೇಯಸ್ ಅಯ್ಯರ್ ರಣಜಿ ಆಡಬೇಕೆಂದು ಬಿಸಿಸಿಐ ಸೂಚಿಸಿದ್ದಾಗ ಬೆನ್ನು ನೋವಿನ ನೆಪ ಹೇಳಿದ್ದರು. ಆದರೆ ಬಳಿಕ ಎನ್ ಸಿಎ ಅಧಿಕಾರಿಗಳು ಅವರು ಫಿಟ್ ಎಂದು ಘೋಷಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಶ್ರೇಯಸ್ ರಣಜಿ ಫೈನಲ್ ಆಡಿದ್ದರು. ಆದರೆ ಕೇವಲ ಬ್ಯಾಟಿಂಗ್ ಮಾತ್ರ ಮಾಡಿ ಮತ್ತೆ ಬೆನ್ನು ನೋವಿನ ನೆಪ ಹೇಳಿದ್ದರು. ಆದರೆ ಈಗ ಐಪಿಎಲ್ ತಂಡ ಸೇರಿಕೊಂಡಿರುವುದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏನು ಮಾಡ್ತಿರೋ ಗೊತ್ತಿಲ್ಲ, ನಮಗೆ ವಿರಾಟ್ ಕೊಹ್ಲಿ ಬೇಕು: ರೋಹಿತ್ ಶರ್ಮಾ ಸೂಚನೆ