Select Your Language

Notifications

webdunia
webdunia
webdunia
webdunia

ಅನುಷ್ಕಾ-ವಿರಾಟ್ ಸಹಾಯ ಮಾಡದೇ ಇದ್ದಿದ್ದರೆ ಕೆಎಲ್ ರಾಹುಲ್ ಕೆರಿಯರ್ ಕತೆ ಖತಂ ಆಗುತ್ತಿತ್ತಂತೆ!

ಅನುಷ್ಕಾ-ವಿರಾಟ್ ಸಹಾಯ ಮಾಡದೇ ಇದ್ದಿದ್ದರೆ ಕೆಎಲ್ ರಾಹುಲ್ ಕೆರಿಯರ್ ಕತೆ ಖತಂ ಆಗುತ್ತಿತ್ತಂತೆ!
ಮುಂಬೈ , ಭಾನುವಾರ, 24 ಜೂನ್ 2018 (08:36 IST)
ಮುಂಬೈ: ವಿರಾಟ್ ಕೊಹ್ಲಿಯ ನೆಚ್ಚಿನ ಬಂಟ ಕೆಎಲ್ ರಾಹುಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಕೆಲವು ವರ್ಷಗಳ ಹಿಂದೆ ಶುರುವಿನಲ್ಲೇ ಕಮರಿ ಹೋಗಬೇಕಿದ್ದ ರಾಹುಲ್ ಕೆರಿಯರ್ ಈ ಸ್ಟಾರ್ ಜೋಡಿಯಿಂದಾಗಿ ಅರಳಿತಂತೆ!

ಹಾಗಂತ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆಗ ನಾನು ಕಳಪೆ ಫಾರ್ಮ್ ನಲ್ಲಿದ್ದೆ. ನನ್ನ ರೂಂನಲ್ಲಿ ಏಕಾಂಗಿಯಾಗಿ ಕುಳಿತು ಮ್ಯಾಚ್ ನಲ್ಲಿ ಮಾಡಿದ ಸರಿ ತಪ್ಪುಗಳ ಬಗ್ಗೆ ಚಿಂತೆ ಮಾಡುತ್ತಾ ಕೂತಿದ್ದೆ.

ಆಗ ನನ್ನ ಬಳಿ ಬಂದ ಅನುಷ್ಕಾ ಡಿನ್ನರ್ ಗೆ ಕರೆದರು. ನಾನು ಒಲ್ಲದ ಮನಸ್ಸಿನಿಂದಲೇ ಹೋದೆ. ಡಿನ್ನರ್ ಟೇಬಲ್ ನಲ್ಲಿ ವಿರಾಟ್ ಮತ್ತು ಅನುಷ್ಕಾ ಎದುರು ನಾನು ಕೂತಿದ್ದೆ. ಆದರೆ ನಾನು ತುಂಬಾ ಮಂಕಾಗಿದ್ದೆ. ನನ್ನನ್ನು ನೋಡಿ ಇಬ್ಬರೂ ಸಮಾಧಾನಿಸಿದರು. ಇಂತಹ ಒತ್ತಡದ ಪರಿಸ್ಥಿತಿಯಿಂದ ಹೊರ ಬರುವುದು ಹೇಗೆಂದು ತಿಳಿಸಿದರು. ಬಹುಶಃ ಅವರಿಬ್ಬರಿಗೂ ನನ್ನ ಮನಸ್ಥಿತಿ ಅರಿವಾಗಿತ್ತು.

ಅದಾದ ಬಳಿಕ ನಾನು ನಿರಾಶೆ, ಒತ್ತಡಗಳನ್ನು ದಾಟಿ ಮುನ್ನಡೆಯಲು ಕಲಿತುಕೊಂಡೆ. ಅವರಿಬ್ಬರ ಜೋಡಿ ನೋಡಿದರೆ ಒತ್ತಡವೆಲ್ಲಾ ಮರೆಯಾಗುತ್ತದೆ. ಅಂದು ಬಹುಶಃ ಅವರು ನನ್ನನ್ನು ಡಿನ್ನರ್ ಗೆ ಕರೆದು ತಿಳಿಸಿ ಹೋಗದೇ ಇದ್ದಿದ್ದರೆ ನನ್ನ ಕ್ರಿಕೆಟ್ ಕೆರಿಯರ್ ಅಲ್ಲಿಗೇ ಮುಗಿಯುತ್ತಿತ್ತು ಎಂದು ಕೆಎಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗಿಂತ ಭಾರತದ ಎಳೆಯರ ತಂಡವೇ ಮುಖ್ಯ ಎಂದಿದ್ದರಂತೆ ರಾಹುಲ್ ದ್ರಾವಿಡ್!