ಚೆನ್ನೈ: ಐದನೇ ಮತ್ತು ಅಂತಿಮ ಟೆಸ್ಟ್ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಚೆನ್ನೈಗೆ ಬಂದಿಳಿದಿದೆ. ಸ್ವತಃ ಅನಿಲ್ ಕುಂಬ್ಳೆ ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪ್ರಕಟಿಸಿದ್ದಾರೆ.
ಇದು ಅಂತಿಮ ಪಂದ್ಯವಾಗಿದ್ದರೂ, ಟೀಂ ಇಂಡಿಯಾ ಈಗಾಗಲೇ ಸರಣಿ ಗೆದ್ದಿರುವುದರಿಂದ ಅಂತಹ ಮಹತ್ವವೇನೂ ಉಳಿದಿಲ್ಲ. ಶುಕ್ರವಾರದಿಂದ ಪಂದ್ಯ ಆರಂಭವಾಗಲಿದೆ. ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮುಂಬೈಯಲ್ಲಿ ರನ್ ಸುನಾಮಿ ಎಬ್ಬಿಸಿದ್ದರು. ಚೆನ್ನೈಯಲ್ಲೂ ಬ್ಯಾಟ್ ಮೂಲಕ ಮತ್ತೊಂದು ಚಂಡಮಾರುತ ತರುತ್ತಾರಾ ನೋಡಬೇಕು.
ಇನ್ನೊಂದೆಡೆ ಹವಾಮಾನವೂ ಕೈ ಕೊಡುವ ಸಂಭವವೂ ಇದೆ. ಮೋಡ ಕವಿದ ವಾತಾವರಣ ಹೀಗೆಯೇ ಮುಂದುವರಿದರೆ ಪಂದ್ಯ ನಡೆಯುವುದು ಕಷ್ಟವಾಗಬಹುದು. ಅಲ್ಲದೆ ಇಡೀ ತಮಿಳುನಾಡು ಜಯಲಲಿತಾ ಸಾವಿನ ದುಃಖದಲ್ಲಿದೆ. ಹೀಗಿರುವಾಗ ಪಂದ್ಯ ಯಾವ ರೀತಿ ಸಾಗುತ್ತದೆಂದು ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ