Select Your Language

Notifications

webdunia
webdunia
webdunia
webdunia

ದುಲ್ಕರ್ ಸಲ್ಮಾನ್ ಚಿತ್ರವಿಮರ್ಶಕರ ಮೇಲೆ ಗರಂ ಆಗಿದ್ಯಾಕೆ?

ದುಲ್ಕರ್ ಸಲ್ಮಾನ್ ಚಿತ್ರವಿಮರ್ಶಕರ ಮೇಲೆ ಗರಂ ಆಗಿದ್ಯಾಕೆ?
ಕೇರಳ , ಭಾನುವಾರ, 17 ಜೂನ್ 2018 (14:18 IST)
ಕೇರಳ : ದಕ್ಷಿಣ ಭಾರತದ ಪ್ರಸಿದ್ಧ ನಟರಲ್ಲಿ ದುಲ್ಕರ್ ಸಲ್ಮಾನ್ ಕೂಡ ಒಬ್ಬರು. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಎನಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಅವರು ಇದೀಗ ಚಿತ್ರವಿಮರ್ಶಕರೊಬ್ಬರ ವಿರುದ್ಧ ಗರಂ ಆಗಿದ್ದಾರೆ.

ಇದಕ್ಕೆ ಕಾರಣ ಇಷ್ಟೇ. ನಟ ದುಲ್ಕರ್ ಸಲ್ಮಾನ್‌, ಮಲಯಾಳಂನ ಫೇಮಸ್‌ ನಟ ಮಮ್ಮುಟ್ಟಿ ಅವರ ಪುತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇವರು ತಂದೆಯ ಹೆಸರನ್ನು ಎಲ್ಲೂ ಬಳಸಿಕೊಳ್ಳದೇ ಸ್ವಪ್ರತಿಭೆಯ ಮೂಲಕವೇ  ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಹಾಗೆ ಇದೀಗ ಅವರು ಮಾಲಿವುಡ್‌ ನಿಂದ ಬಾಲಿವುಡ್‌ಗೂ ಕಾಲಿಟ್ಟಿದ್ದು, ಸದ್ಯದಲ್ಲೇ ಇವರು ನಟಿಸಿದ ಹಿಂದಿ ಚಿತ್ರ ತೆರೆ ಕಾಣಲಿದೆ.

 

ಆದರೆ ಚಿತ್ರವಿಮರ್ಶಕ ತರಣ್‌ ಆದರ್ಶ ಎಂಬುವವರು ಮಾತ್ರ ಇತ್ತೀಚಿಗೆ ಮಮ್ಮುಟಿ ತಮ್ಮ ಮಗನ ಬಾಲಿವುಡ್ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಗರಂ ಆದ ದುಲ್ಕರ್ ಸಲ್ಮಾನ್ ಅವರು ನೀವು ಹೇಳುತ್ತಿರುವುದು ಶುದ್ಧ ಸುಳ್ಳು. ನನ್ನ ತಂದೆ ಇದುವರೆಗೆ ನನ್ನನ್ನು ಹಾಗೂ ನನ್ನ ಯಾವ ಚಿತ್ರಗಳನ್ನು ಪ್ರಮೋಟ್ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕಪೂರ್ ತಮ್ಮ ಪತ್ನಿಯನ್ನು ಕರೆಯುವುದು ಈ ಸ್ಟಾರ್ ನಟಿಯ ಹೆಸರಿನಿಂದಂತೆ!