Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಮುಖಕ್ಕೆ ಮಸಿ ಎರಚುತ್ತೇವೆ ಎಂದು ಕಳಿಂಗ ಸೇನೆ ಹೇಳಿದ್ಯಾಕೆ?

ಶಾರುಖ್ ಖಾನ್ ಮುಖಕ್ಕೆ ಮಸಿ ಎರಚುತ್ತೇವೆ ಎಂದು ಕಳಿಂಗ ಸೇನೆ ಹೇಳಿದ್ಯಾಕೆ?
ಮುಂಬೈ , ಶನಿವಾರ, 24 ನವೆಂಬರ್ 2018 (06:58 IST)
ಮುಂಬೈ : ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆಯಲಿರುವ ಭಾರತ ಮಹಿಳಾ ಹಾಕಿ ತಂಡ, 2018ರ ವಿಶ್ವಕಪ್‌'ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಈ ಹಾಕಿ ವಿಶ್ವ​ಕಪ್​ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಪಾಲ್ಗೊಳ್ಳದಂತೆ ಸ್ಥಳೀಯ ಸಂಘಟನೆಯೊಂದು ಬೆದರಿಕೆ ಹಾಕಿದೆ.


ಕಾರಣ ನಟ ಶಾರುಖ್ ಖಾನ್ 2001ರಲ್ಲಿ ತೆರೆಕಂಡ 'ಅಶೋಕ' ಚಿತ್ರದಲ್ಲಿ ಕಳಿಂಗ ಯುದ್ಧವನ್ನು ತಪ್ಪಾಗಿ ಚಿತ್ರಿಸಿದ್ದ ಕಾರಣ ಇದು ಒಡಿಶಾ ಜನರ ಭಾವನೆಗಳಿಗೆ ಇದರಿಂದ ನೋವಾಗಿದೆ. ಆದಕಾರಣ ಈ ವಿಷಯದ ಕುರಿತಾಗಿ ನ.1ರಂದು ಪೊಲೀಸರಿಗೆ ದೂರು ನೀಡಿದ್ದು ಶಾರುಖ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಕಳಿಂಗ ಸೇನಾ ಎಂಬ ಸ್ಥಳೀಯ ಸಂಘಟನೆ ಹೇಳಿದೆ.


ಒಂದು ವೇಳೆ ಶಾರುಖ್ ಖಾನ್ ಕ್ಷಮೆ ಕೇಳದೆ ಹಾಕಿ ವಿಶ್ವ​ಕಪ್​ ಕಾರ್ಯಕ್ರಮಕ್ಕೆ ಆಗಮಿಸಿದರೆ ಅವರ ಮುಖಕ್ಕೆ ಮಸಿ ಎರಚುತ್ತೇವೆ, ವಿಮಾನ ನಿಲ್ದಾಣದಲ್ಲಿ ಅವರಿಗೆ ಕಪ್ಪು ಬಾವುಟ ತೋರಿಸಲಾಗುವುದು ಎಂದು ಸಂಘಟನೆಯ ಮುಖ್ಯಸ್ಥ ಹೇಮಂತ್​ ರಾತ್​ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಜಯ್ ರಾವ್ ಪತ್ನಿ ಸ್ವಪ್ನ ರಾವ್