Select Your Language

Notifications

webdunia
webdunia
webdunia
webdunia

ಅಧಿಕಾರಿಗಳು ಒಪ್ಪಿದರೆ ಇಂದೇ ಶ್ರೀದೇವಿ ಮೃತದೇಹ ಭಾರತಕ್ಕೆ

ಅಧಿಕಾರಿಗಳು ಒಪ್ಪಿದರೆ ಇಂದೇ ಶ್ರೀದೇವಿ ಮೃತದೇಹ ಭಾರತಕ್ಕೆ
ನವದೆಹಲಿ , ಮಂಗಳವಾರ, 27 ಫೆಬ್ರವರಿ 2018 (08:56 IST)
ನವದೆಹಲಿ: ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ಮರಣೋತ್ತರ ಪರೀಕ್ಷೆ ಮುಗಿದಿದ್ದು ಇತರ ಔಪಚಾರಿಕ ಪ್ರಕ್ರಿಯೆಗಳು ಮುಗಿದರೆ ಇಂದೇ ಭಾರತಕ್ಕೆ ಆಗಮಿಸಲಿದೆ.
 

ನಿನ್ನೆ ತವರಿಗೆ ಶ್ರೀದೇವಿ ಮೃತದೇಹ ಬರುತ್ತದೆಂಬ ಸುದ್ದಿಗಳಿತ್ತಾದರೂ ಸಾವಿನ ಕುರಿತಾದ ಕಾರಣಗಳ ವಿಚಾರಣೆ, ಇತರ ಪ್ರಯೋಗಾಲಯ ಪರೀಕ್ಷೆ ಹಿನ್ನಲೆಯಲ್ಲಿ ಆಗಮನವಾಗಿರಲಿಲ್ಲ.

ಈಗಾಗಲೇ ಶ್ರೀದೇವಿ ಮೃತದೇಹ ಕರೆತರಲು 17 ಸೀಟ್ ಗಳ ಉದ್ಯಮಿ ಅನಿಲ್ ಅಂಬಾನಿ ಅವರ ಖಾಸಗಿ ಜೆಟ್ ವಿಮಾನ ದುಬೈ ತಲುಪಿದೆ. ದುಬೈ ಪೊಲೀಸರ ವಿಚಾರಣೆ ಪೂರ್ಣಗೊಂಡು ಅನುಮತಿ ದೊರಕಿದರೆ ಇಂದೇ ಶ್ರೀದೇವಿ ಮೃತದೇಹ ಭಾರತಕ್ಕೆ ಮರಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್