Select Your Language

Notifications

webdunia
webdunia
webdunia
webdunia

ನಟ ಸಿದ್ದಾರ್ಥ್ e-ಸಿಗರೇಟ್ ಬ್ಯಾನ್ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ಯಾಕೆ ?

ನಟ ಸಿದ್ದಾರ್ಥ್ e-ಸಿಗರೇಟ್ ಬ್ಯಾನ್ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ಯಾಕೆ ?
ಚೆನ್ನೈ , ಶುಕ್ರವಾರ, 29 ಜೂನ್ 2018 (06:36 IST)
ಚೆನ್ನೈ : ಕಾಲಿವುಡ್ ಸ್ಟಾರ್ ನಟ ಸಿದ್ದಾರ್ಥ್ ಅವರು e-ಸಿಗರೇಟ್ ತಯಾರಿ ಹಾಗು ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ತಮಿಳುನಾಡು ಸರ್ಕಾರವನ್ನು ಒತ್ತಾಯಿಸುವುದರ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.


‘ಇತ್ತೀಚಿಗೆ ಆರೋಗ್ಯವನ್ನು ಹೀನ ಸ್ಥಿತಿಗೆ ತೆಗೆದುಕೊಂಡು ಹೋಗುವಂತಹ ಹಾನಿಕಾರಕ ಕೆಮಿಕಲ್ ಬಳಸಿ ತಯಾರಿಸುವಂತಹ e- ಸಿಗರೇಟ್ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಬಳಸುತ್ತಿದ್ದಾರೆ. ಹಾಗು ಇದರಿಂದ ನಮ್ಮ ಯುವ ಜನತೆ ಹಾಳಾಗುವುದರ ಮೂಲಕ ಸಾಮಾಜಿಕ ಸ್ಥಿತಿಯನ್ನೂ ಸಹ ಅನಾರೋಗ್ಯಕರವಾಗಿ ಬೆಳೆಯುವಂತೆ ಮಾಡಿದೆ. ಹಾಗೆಯೇ ಈ e-ಸಿಗರೇಟ್ ಮಾರುಕಟ್ಟೆಗೆ ಬಂದಾಗಿನಿಂದ ಕೆಲ ತಂಬಾಕು ಸಹಿತ ಸಿಗರೇಟ್ ಕಂಪನಿಗಳು ಹಾಗು ತಂಬಾಕು ಬೆಳೆಗಾರರು ನಷ್ಟವನ್ನು ಅನುಭವಿಸುವುದರಿಂದ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ, ಮತ್ತು ಮಿಲಿಯನ್ ಲೆಕ್ಕದಲ್ಲಿ ಈ ಕೆಮಿಕಲೈಸ್ಡ್ ಸಿಗರೇಟ್ ಗಳಿಗೆ ಗುಲಾಮರಾಗುವುದರ ಮೂಲಕ ಅನಾರೋಗ್ಯದಿಂದ ನರಳುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಸಮೀಕರಿಸಿ ನಮ್ಮ ಬೇಡಿಕೆಯನ್ನು ಕೈಗೆತ್ತಿಕೊಳ್ಳುವುದರ ಮೂಲಕ ಸಾಮಾಜಿಕ ಸ್ಥಿತಿ-ಗತಿಗಳನ್ನು ಸುಧಾರಿಸುವಂತೆ ಮಾಡಬೇಕು’ ಎಂದು ಸಿದ್ದಾರ್ಥ್ ಸರ್ಕಾರಕ್ಕೆ ವಿನಂತಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಜಾಹ್ನವಿ ಕಪೂರ್ ಈ ಕ್ಯಾರೆಕ್ಟರ್ ನಟ ಇಶಾನ್ ಕಟ್ಟರ್ ಗೆ ತುಂಬಾ ಇರಿಟೇಟ್ ಮಾಡುತ್ತದೆಯಂತೆ!