Select Your Language

Notifications

webdunia
webdunia
webdunia
webdunia

ನಟಿ ಕಸ್ತೂರಿ ಮಂಗಳಮುಖಿಯರ ಬಳಿ ಕ್ಷಮೆ ಕೇಳಲು ಕಾರಣವೇನು?

ನಟಿ ಕಸ್ತೂರಿ ಮಂಗಳಮುಖಿಯರ ಬಳಿ ಕ್ಷಮೆ ಕೇಳಲು ಕಾರಣವೇನು?
ಚೆನ್ನೈ , ಭಾನುವಾರ, 17 ಜೂನ್ 2018 (15:18 IST)
ಚೆನ್ನೈ : ಮಂಗಳಮುಖಿಯರಿಗೆ ಹೋಲಿಕೆ ಮಾಡುವುದರ ಮೂಲಕ ಸರ್ಕಾರದ ನಡೆಯನ್ನು ಟೀಕಿಸಿದ ಕಾಲಿವುಡ್ ನಟಿ ಕಸ್ತೂರಿ ಅವರು ಮಂಗಳಮುಖಿಯರ ಬಳಿ ಕ್ಷಮೆ ಕೋರಿದ್ದಾರೆ.


ವಿಧಾನಸಭಾ ಸ್ಪೀಕರ್ ತಮಿಳುನಾಡಿನ 18 ಮಂತ್ರಿಗಳನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದರು. ಇದನ್ನು ಖಂಡಿಸಿದ ನಟಿ ಕಸ್ತೂರಿ ಅವರು ತೀರ್ಪು ನೀಡಿರಿರುವವರನ್ನು ಮಂಗಳಮುಖಿಯರಿಗೆ ಹೋಲಿಕೆ ಮಾಡುವುದರ ಮೂಲಕ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಒಬ್ಬ ಮಹಿಳೆಯಾಗಿ ಈ ರೀತಿಯ ಲಿಂಗ ತಾರತಮ್ಯದ ಕುರಿತು ಹೀನವಾಗಿ ಮಂಗಳಮುಖಿಯರನ್ನು ಹೀಯಾಳಿಸುವ ಮನಸ್ಥಿತಿ ಈ ನಟಿಗೆ ಇದೆ ಎಂದರೆ ಇವರು ಸಾಮಾಜಿಕ ಸಾಮರಸ್ಯದ ಕುರಿತು ಯಾವ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಹಲವರು ಪ್ರಶ್ನೆಸಿದ್ದಾರೆ.
ಇದನ್ನು ಗಮನಿಸಿದ ನಟಿ ಕಸ್ತೂರಿ ಅವರು ಮಂಗಳಮುಖಿಯವರಿಗೆ ಹೋಲಿಕೆ ಮಾಡಿ ಕಮೆಂಟ್ ಮಾಡಿರುವುದು ನನ್ನ ತಪ್ಪು, ಆದ್ದರಿಂದ ನಾನು ಮಂಗಳಮುಖಿಯವರ ಹತ್ತಿರ ಕ್ಷಮೆ ಕೋರುತ್ತೇನೆ ಎಂದು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಗೆ ಅಭಿಮಾನಿಗಳು ನೀಡಿದ ಹೊಸ ಬಿರುದು ಯಾವುದು ಗೊತ್ತಾ?