Select Your Language

Notifications

webdunia
webdunia
webdunia
webdunia

ಅಮಿತಾಭ್ ಬಚ್ಚನ್ ಅನಾರೋಗ್ಯವೆಲ್ಲಾ ಸುಳ್ಳೋ ಸುಳ್ಳು

Amitabh Bacchan

Krishnaveni K

ಮುಂಬೈ , ಶನಿವಾರ, 16 ಮಾರ್ಚ್ 2024 (13:06 IST)
ಮುಂಬೈ: ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಹೃದಯ ಸಂಬಂಧೀ ಸಮಸ್ಯೆಯಾಗಿದೆ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಿನ್ನೆಯಿಡೀ ಸುದ್ದಿ ವೈರಲ್ ಆಗಿತ್ತು. ಆದರೆ ಇಂದು ಅದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಅಮಿತಾಭ್ ಬಚ್ಚನ್ ಗೆ ನಿನ್ನೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತನಾಳಗಳಲ್ಲಿ ಬ್ಲಾಕ್ ಇದ್ದಿದ್ದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲಾಯಿತು ಎಂದು ವರದಿಯಾಗಿತ್ತು. ಇದು ಅವರ ಅಭಿಮಾನಿಗಳಿಗೆ ಆತಂಕ ತಂದಿತ್ತು.

ಆದರೆ ಅದೆಲ್ಲವೂ ಸುಳ್ಳು ಎಂದು ಗೊತ್ತಾಗಿದೆ. ಅಮಿತಾಭ್ ನಿನ್ನೆ ಐಎಸ್ ಪಿಎಲ್ ಫೈನಲ್ ಮ್ಯಾಚ್ ನಲ್ಲಿ ಪುತ್ರ ಅಭಿಷೇಕ್ ಜೊತೆ ಭಾಗಿಯಾಗಿದ್ದರು. ಅವರು ಮ್ಯಾಚ್ ಎಂಜಾಯ್ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಇದ್ದರು.

ಆ ಮೂಲಕ ಅವರ ಅನಾರೋಗ್ಯದ ಸುದ್ದಿಗಳೆಲ್ಲಾ ಸುಳ್ಳು ಎಂದು ಗೊತ್ತಾಗಿದೆ. ಅಮಿತಾಭ್ ಮೈದಾನಕ್ಕೆ ಬರುತ್ತಿದ್ದಂತೇ ಅಭಿಮಾನಿಗಳು ಅವರ ಆರೋಗ್ಯ ವಿಚಾರಿಸಿದ್ದಾರೆ. ಅದಕ್ಕೆ ಅವರು ನಾನು ಚೆನ್ನಾಗಿದ್ದೇನೆ ಎಂದು ಕೈ ಬೀಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಖಾಯಿಲೆಯನ್ನು ಬಲವಂತವಾಗಿ ಹೇಳಬೇಕಾಯಿತು: ಸಮಂತಾ ಋತು ಪ್ರಭು