Select Your Language

Notifications

webdunia
webdunia
webdunia
webdunia

ಮಂಗಳಮುಖಿಯರಿಂದ ಪಡೆದ ಈ ವಸ್ತುವಿನಂದ ಅದೃಷ್ಟವಂತರಾಗುತ್ತಾರಂತೆ!

ಮಂಗಳಮುಖಿಯರಿಂದ ಪಡೆದ ಈ ವಸ್ತುವಿನಂದ ಅದೃಷ್ಟವಂತರಾಗುತ್ತಾರಂತೆ!
ಬೆಂಗಳೂರು , ಗುರುವಾರ, 23 ನವೆಂಬರ್ 2017 (08:42 IST)
ಬೆಂಗಳೂರು: ಹಣದ ಸಮಸ್ಯೆ ಯಾರಿಗಿಲ್ಲ ಹೇಳಿ? ಎಷ್ಟೇ ಸಂಪಾದಿಸಿದರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ನಯಾಪೈಸೆ ಉಳಿಯಲ್ಲ ಎಂಬ ದೂರು ಎಲ್ಲರ ಬಳಿ ಇರುತ್ತದೆ. ಇದಕ್ಕೆ ಒಂದು ಪರಿಹಾರ ಕೂಡ ಇದೆ. ಅದೇನು ಗೊತ್ತಾ…? ಮಂಗಳಮುಖಯರಿಂದ ಹಣ ಪಡೆದುಕೊಂಡರೆ ನಿಮಗೆ ಮತ್ತೆಂದೂ ಹಣದ ಸಮಸ್ಯೆ ಎದುರಾಗದಂತೆ!

ಮಂಗಳಮುಖಿಯರೇ ನಮ್ಮಿಂದ ದುಡ್ಡು ಪೀಕುತ್ತಾರೆ ಇನ್ನು ಅವರ ಬಳಿ ಹಣ ಪಡೆಯುವುದೇ ಎಂದು ಭಯಪಡಬೇಡಿ.ಮಂಗಳಮುಖಿಯರು ಗಂಡಿನ ದೇಹದೊಳಗೆ ಹೆಣ್ಣು, ಹೆಣ್ಣಿನ ದೇಹದೊಳಗೆ ಗಂಡು ಹೊಂದಿರುವ ದೇಹವಾಗಿರುವುದರಿಂದ ಅವರನ್ನು ಅರ್ಧನಾರೀಶ್ವರನ ಅ಻ವತಾರ ಎನ್ನುತ್ತಾರೆ. ಇವರಿಗೆ ಕೆಲವು ದಿವ್ಯಶಕ್ತಿಗಳು ಇರುತ್ತದೆಯಂತೆ.

ಇವರಿಂದ ಆರ್ಶೀವಾದ ಪಡೆದವರು ಯಾವುದೇ ತೊಂದರೆ ಇಲ್ಲದೇ ಜೀವನದಲ್ಲಿ ಉನ್ನತಿ ಹೊಂದುತ್ತಾರಂತೆ. ಮಂಗಳವಾರದ ದಿನ ನಿಮ್ಮ ಮನೆಯಿಂದ 11, 21, 51, 101 ಹೀಗೆ ಒಂದು ರೂಪಾಯಿ ಹೆಚ್ಚು ಇರುವಂತೆ ಹಣವನ್ನು ಅವರಿಗೆ ಕೊಟ್ಟು ಅವರಿಂದ ಕೇವಲ ದು ರೂಪಾಯಿಯನ್ನು ನೀಡುವಂತೆ ಆರ್ಶೀವದಿಸಿಕೊಂಡು ಅದನ್ನು ತೆಗೆದುಕೊಂಡು ಮನೆಯಲ್ಲಿ ಇಡಬೇಕಂತೆ. ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪೂಜಿಸಿದರೆ ಜೀವನದಲ್ಲಿ ಅದೃಷ್ಟ ಹುಡುಕಿಕೊಂಡು ಬರುತ್ತದೆಯಂತೆ ಎನ್ನುತ್ತಾರೆ ಪಂಡಿತ ಮಹಾಶಯರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರ ಗ್ರಹಣದ ಸಂದರ್ಭ ಏನು ಮಾಡಬೇಕು.. ದೋಷ ಕಳೆಯುವುದು ಹೇಗೆ..?