Webdunia - Bharat's app for daily news and videos

Install App

ಯಾಕೆ ಕನಸುಗಳು ಬೀಳ್ತವೆ? ಕನಸಿನ ಲೋಕದ ಗೂಢಾರ್ಥ ಬಲ್ಲಿರಾ? ಇಲ್ಲಿದೆ ಪರಿಹಾರ

Webdunia
ಮಂಗಳವಾರ, 25 ಮಾರ್ಚ್ 2014 (10:28 IST)
PR
ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳೂ ಭವಿಷ್ಯದ ಸಂಕೇತಗಳೇ... ಎಂಬ ಪ್ರಶ್ನೆ ಜ್ಯೋತಿಷಿಗಳಿಂದ ಹಿಡಿದು ವಿಜ್ಞಾನಿಗಳವರೆಗೂ ಕಾಡಿದ್ದಿದೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ.

ಜ್ಯೋತಿಷಿಗಳ ಪ್ರಕಾರ, ಮಲಗಿದ್ದಾಗ ಆತ್ಮ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತದೆ. ಮನಸ್ಸು ದೇಹ ವಿಶ್ರಾಂತಿಯ ಸ್ಥಿಯಲ್ಲಿದ್ದಾಗ ಪಂಚೇಂದ್ರಿಯಗಳೂ ಶಾಂತ ಸ್ಥಿತಿಯಲ್ಲಿರುತ್ತದೆ. ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಈ ಕನಸು ಅರ್ಥಾತ್ ಸ್ವಪ್ನಗಳಿಗೂ ಭೂತ, ಭವಿಷ್ಯ, ವರ್ತಮಾನಕ್ಕೂ ಸಂಬಂಧವಿದೆಯೇ ಎಂಬುದನ್ನು ಜ್ಯೋತಿಷ್ಯ ವಿಜ್ಞಾನದಲ್ಲೂ ಸಾಕಷ್ಟು ವಿವರಣೆಯಿದೆ. ಕನಸಿನಲ್ಲಿ ಕಂಡ ವಸ್ತುಗಳಿಗೂ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳಿಗೂ ಇರುವ ತಾಳಮೇಳವನ್ನು ಜ್ಯೋತಿಷ್ಯ ಹೀಗೆ ಹೇಳುತ್ತದೆ.

ಕನಸಿನಲ್ಲಿ ನೀವು ಮೀನು ನೋಡಿದರೆ ಮನೆಯಲ್ಲಿ ಸದ್ಯದಲ್ಲೇ ಶುಭ ಕಾರ್ಯ ನಡೆಯುತ್ತದೆ ಎಂದರ್ಥ. ಮಾಂಸ ತಿನ್ನುವಂತೆ ಕನಸು ಬಿದ್ದರೆ ನಿಮಗೆ ಏನೋ ಗಾಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ತಾನೇ ಸತ್ತುಹೋದಂತೆ ಕನಸು ಬಿದ್ದರೆ ಫೇಲ್ ಆಗುವ ಸಂಭವ ಇದೆ. ಗಾಳಿಯಲ್ಲಿ ಹಕ್ಕಿಯಂತೆ ಹಾರಾಡುವ ಕನಸು ಕಂಡರೆ ನಿಮಗೆ ಸದ್ಯದಲ್ಲೇ ಪ್ರಯಾಣಯೋಗವಿರಲಿದೆ. ಕೈಕಾಲು ತೊಳೆದುಕೊಂಡಂತೆ ಕನಸು ಬಿದ್ದರೆ ಎಲ್ಲ ಚಿಂತೆಗಳನ್ನೂ ಬಿಟ್ಟು ನಿಶ್ಚಿಂತರಾದಂತೆ. ಯಾರಿಂದಲೋ ಚುಂಬನ ಸ್ವೀಕರಿಸಿದಂತೆ ಕನಸು ಬಿದ್ದರೆ ಸದ್ಯದಲ್ಲೇ ನಿಮ್ಮನ್ನು ಮಟ್ಟಹಾಕಲು ಶತ್ರುಗಳಾರೋ ಕಾಯುತ್ತಿದ್ದಾರೆ ಎಂದರ್ಥ.

ಹಾವನ್ನು ಹಿಡಿದುಕೊಂಡಂತೆ ಕನಸು ಕಂಡರೆ ಸಫಲತೆ ಪ್ರಾಪ್ತವಾಗುತ್ತದೆ. ಉದ್ದಕ್ಕೆ ದಾಡಿ ಬಿಟ್ಟಂತೆ ಕನಸು ಬಿದ್ದರೆ ದಾಂಪತ್ಯ ಜೀವನದಲ್ಲಿದ್ದ ಕಷ್ಟಗಳೆಲ್ಲ ಕರಗಿ ಹೋಗುತ್ತದೆ. ಯಾರೋ ಹಿರಿಯರ ಆಶೀರ್ವಾದ ಪಡೆದಂತೆ ಕನಸು ಬಿದ್ದರೆ, ಮಾನ ಸನ್ಮಾನ ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ ಎಂದರ್ಥ. ಹಾಲು ಕುಡಿದಂತೆ ಕನಸು ಬಿದ್ದರೆ ಗೌರವ ಪ್ರಾಪ್ತಿಯಾಗುತ್ತದೆ. ಬಾಯಾರಿಕೆಯಾಗಿ ನೀರು ಕುಡಿದಂತೆ ಕಂಡರೆ ಭಾಗ್ಯೋದಯವಾಗುತ್ತದೆ. ನಾಯಿ ಕಚ್ಚಿದಂತೆ, ಹಾಗೂ ನಾಯಿಯನ್ನು ಸಾಕಿದಂತೆ ಕನಸು ಬಿದ್ದರೆ ಸಂಕಟ ಪ್ರಾಪ್ತಿಯಾಗುತ್ತದೆ. ಹಾರುವ ಹಕ್ಕಿಯನ್ನು ಕನಸಿನಲ್ಲಿ ಕಂಡಿರಾರೆ, ನಿಮಗೆ ಗೌರವ, ಮಾನ ಸನ್ಮಾನಗಳು ದೊರಕುತ್ತದೆ.

ಕನಸಿನಲ್ಲಿ ನವಿಲು ನೋಡಿದರೆ ಶೋಕ ಸಂದೇಶ ಬರುತ್ತದೆ. ತಾನೇ ಮದುವೆಯಾಗುವುದನ್ನು ನೋಡಿದರೆ ತುಂಬ ಕಷ್ಟನಷ್ಟಗಳು ಎದುರಾಗುತ್ತವೆ. ಕನ್ನಡಿ ನೋಡಿದಂತೆ ಕನಸು ಬಿದ್ದರೆ ಮನಸ್ಸು ಚಂಚಲವಾಗುತ್ತದೆ. ಹಾಗೂ ಮನಸ್ಸು ವಿಚಲಿತವಾಗುತ್ತದೆ. ರೈಲಿನಲ್ಲಿ ಹತ್ತುವುದು ಕನಸು ಬಿದ್ದರೆ ಯಾತ್ರೆ ಮಾಡುವ ಯೋಗ ಪ್ರಾಪ್ತಿಯಾಗುತ್ತದೆ. ಕಾಲು ಎಡವಿ ಬೀಳುವುದನ್ನು ನೋಡಿದರೆ ಅವನತಿ ಆರಂಭವಾಗುತ್ತದೆ ಎಂದರ್ಥ.

ಕುದುರೆಯಿಂದ ಬಿದ್ದುಬಿಟ್ಟಂತೆ ಕನಸು ಬಿದ್ದರೆ ನಿಮ್ಮ ಹುದ್ದೆಯಿಂದ ಕೆಳಗಿಳಿಯುತ್ತೀರಿ ಎಂದರ್ಥ. ಅದೇ ಕುದುರೆಯ ಮೇಲೇರಿ ಕುಳಿತಂತೆ ಕನಸು ಬಿದ್ದರೆ ನಿಮಗೆ ಸದ್ಯದಲ್ಲೇ ಒಂದು ಉತ್ತಮ ಹುದ್ದೆ ಕಾದಿದೆ ಎಂದರ್ಥ. ತಾನೇ ಸತ್ತಂತೆ ಕನಸು ಬಿದ್ದರೆ ಎಲ್ಲ ಚಿಂತೆಗಳೂ ದೂರವಾಗುತ್ತದೆ ಎಂಬುದಾಗಿ ಗ್ರಹಿಸಬಹುದು.

ಇವಿಷ್ಟಲ್ಲದೆ, ಸಮುದ್ರ, ಅರಳುವ ಹೂವು, ಯುವತಿಯೊಂದಿಗೆ ಸರಸ ಅಥವಾ ಸುಂದರ ಯುವತಿ ದರ್ಶನ, ಪ್ರಸಾದ ಸ್ವೀಕಾರ, ಆಶೀರ್ವಾದ ಪಡೆಯುವುದು, ಪುಸ್ತಕ ಓದುವುದು, ದೇವಸ್ಥಾನಕ್ಕೆ ತೆರಳುವುದು, ಹಾವು ಕಡಿಯುವುದು, ಆನೆ ಸವಾರಿ, ಹಣ್ಣುಗಳ ಪ್ರಾಪ್ತಿ, ಮೈಮೇಲೆ ಸೆಗಣಿ ಮೆತ್ತಿಕೊಂಡಂತೆ ಕನಸಿನಲ್ಲಿ ಕಂಡರೆ ಧನ ಲಾಭವಾಗುತ್ತದೆ ಎಂದರ್ಥ.

ಕೊಲೆ ಮಾಡುವುದು, ಸ್ತನ್ಯಪಾನ ಮಾಡುವುದು, ಶರಾಬು ಕುಡಿಯುವುದು, ಎಣ್ಣೆ ಕುಡಿಯುವುದು, ಮಿಠಾಯಿ ತಿನ್ನುವುದು, ವಿವಾಹವಾಗುವುದು, ಪೊಲೀಸರನ್ನು ನೋಡುವುದು, ತನ್ನದೇ ಕೇಶ ಮುಂಡನ ಮಾಡಿದಂತೆ ಕನಸುಗಳು ಕಂಡರೆ ಅದು ಮೃತ್ಯುಕೂಪ ಎಂದು ಪರಿಗಣಿಸಲ್ಪಡುತ್ತದೆ. ವಿಧವೆಗೆ ದಾಡಿ ಬಂದಂತೆ ಕನಸು ಬಿದ್ದರೆ ಆಕೆಗೆ ಮರುಮದುವೆಯಾಗುವುದರ ಸಂಕೇತ. ವಿವಾಹಿತ ಮಹಿಳೆ ಅಥವಾ ವ್ಯಕ್ತಿಯ ಕೂದಲು ಬೆಳ್ಳಗಾದಂತೆ ಕನಸು ಬಿದ್ದರೆ ಜೀವನ ಸಂಗಾತಿಯಿಂದ ವಿಯೋಗ ಅಥವಾ ವಿಚ್ಛೇದನದ ಸಂಕೇತಗಳಾಗಿವೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments