Select Your Language

Notifications

webdunia
webdunia
webdunia
webdunia

ಕುಮಾರ್ ಸ್ವಾಮಿ ಜತೆಗೆ ಸಂಬಂಧ ಆಲ್ ಈಸ್ ವೆಲ್ ಎಂದ ಜಮೀರ್ ಅಹಮ್ಮದ್

ಕುಮಾರ್ ಸ್ವಾಮಿ ಜತೆಗೆ ಸಂಬಂಧ ಆಲ್ ಈಸ್ ವೆಲ್ ಎಂದ ಜಮೀರ್ ಅಹಮ್ಮದ್
ಬೆಂಗಳೂರು , ಶುಕ್ರವಾರ, 25 ಮೇ 2018 (11:35 IST)
ಬೆಂಗಳೂರು: ಚುನಾವಣೆಗೆ ಮೊದಲು ಜೆಡಿಎಸ್ ನಿಂದ ಉಚ್ಛಾಟನೆಗೊಂಡಾಗ ಎಚ್ ಡಿ ಕುಮಾರಸ್ವಾಮಿ ಸಿಎಂ ಆದರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಇದೀಗ ಆಲ್ ಈಸ್ ವೆಲ್ ಎಂದಿದ್ದಾರೆ.

ಕಾಂಗ್ರೆಸ್ ಜತೆ ಸೇರಿ ಇದೀಗ ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚಿಸುತ್ತಿದ್ದಂತೇ ಜಮೀರ್ ಉಲ್ಟಾ ಹೊಡೆದಿದ್ದಾರೆ. ವಿಶ್ವಾಸ ಮತ ಪ್ರಕ್ರಿಯೆಗೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ ನನ್ನ, ಕುಮಾರಸ್ವಾಮಿ ನಡುವಿನ ಸಂಬಂಧ ಚೆನ್ನಾಗಿದೆ ಎಂದಿದ್ದಾರೆ.

ನಮ್ಮಿಬ್ಬರ ನಡುವಿನ ಅಸಮಾಧಾನವೆಲ್ಲವೂ ಸರಿಯಾಗಿದೆ. ನಾವು ಚೆನ್ನಾಗಿಯೇ ಇದ್ದೇವೆ. ಈ ಸರ್ಕಾರದಲ್ಲಿ ನಾನು ಮಂತ್ರಿ ಹುದ್ದೆ ಕೇಳಿಲ್ಲ. ಅವರಾಗಿಯೇ ಅಗತ್ಯ ಬಂದರೆ ಕರೆದು ಕೊಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಾಸಮತಕ್ಕೆ ಮೊದಲು ತಂದೆ ದೇವೇಗೌಡರ ಭೇಟಿಯಾದ ಸಿಎಂ ಕುಮಾರಸ್ವಾಮಿ