Select Your Language

Notifications

webdunia
webdunia
webdunia
webdunia

ಕೈಗೆ ಸಿಗದ ಶಾಸಕರ ಕರೆತರಲು ಜಮೀರಣ್ಣನೇ ಹೋದರು!

ಕೈಗೆ ಸಿಗದ ಶಾಸಕರ ಕರೆತರಲು ಜಮೀರಣ್ಣನೇ ಹೋದರು!
ಬೆಂಗಳೂರು , ಬುಧವಾರ, 16 ಮೇ 2018 (19:06 IST)
ಬೆಂಗಳೂರು: ಕೆಪಿಸಿಸಿ ಸಂಪರ್ಕಕ್ಕೆ ಸಿಗದೇ ಬಿಜೆಪಿ ಗಾಳಕ್ಕೆ ಬಲಿಯಾದರೇ ಎಂಬ ಅನುಮಾನ ಸೃಷ್ಟಿಸಿದ್ದ ಕಾಂಗ್ರೆಸ್ ನ ಶಾಸಕರಾದ ಆನಂದ್ ಸಿಂಗ್ ರನ್ನು ಕರೆತರಲು ಸ್ವತಃ ಜಮೀರ್ ಅಹಮ್ಮದ್ ತೆರಳಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಬಿಜೆಪಿ ಅಮಿಷಕ್ಕೆ ಬಲಿಯಾಗದಂತೆ ಕೆಪಿಸಿಸಿ ಸಭೆಗೆ ಕರೆತರಲು ಖುದ್ದಾಗಿ ತೆರಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮತ್ತೊಮ್ಮೆ ಶಾಸಕರ ಸಭೆ ನಡೆಯುತ್ತಿದ್ದು, ಅದಾದ ಬಳಿಕ ಎಲ್ಲಾ ಶಾಸಕರೂ ರೆಸಾರ್ಟ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಈ ನಡುವೆ ರಾಜ್ಯಪಾಲರು ತಜ್ಞರ ಸಲಹೆ ಪಡೆಯುತ್ತಿದ್ದು, ಯಾರಿಗೆ ಸರ್ಕಾರ ಭಾಗ್ಯ ನೀಡಬೇಕೆಂದು ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸಿಎಂ ಪ್ರಮಾಣ ವಚನಕ್ಕೆ ರಾಜಭವನದಲ್ಲಿ ಸಿದ್ಧತೆ! ಹಾಗಿದ್ದರೆ ಸಿಎಂ ಯಾರು?