Select Your Language

Notifications

webdunia
webdunia
webdunia
webdunia

ಕಾನೂನು ಸಚಿವ ಟಿ.ಬಿ ಜಯಚಂದ್ರರನ್ನು ವಕೀಲರು ತರಾಟೆಗೆ ತೆಗೆದುಕೊಂಡಿದ್ಯಾಕೆ?

ಕಾನೂನು ಸಚಿವ ಟಿ.ಬಿ ಜಯಚಂದ್ರರನ್ನು ವಕೀಲರು ತರಾಟೆಗೆ ತೆಗೆದುಕೊಂಡಿದ್ಯಾಕೆ?
ತುಮಕೂರು , ಶುಕ್ರವಾರ, 27 ಏಪ್ರಿಲ್ 2018 (06:25 IST)
ತುಮಕೂರು : ಮತ ಕೇಳಲು ನಿಮಗೆ ಹಕ್ಕಿರುವ ಹಾಗೆ ನಮ್ಮ ಬೇಡಿಕೆಯನ್ನು ಈಡೇರಿಸುವ ಜವಾಬ್ದಾರಿಯೂ ಇರಬೇಕು ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರನ್ನು ವಕೀಲರೆಲ್ಲರೂ ಸೇರಿ ತರಾಟಿಗೆ ತೆಗೆದುಕೊಂಡಿದ್ದಾರೆ.


ಶಿರಾ ವಕೀಲರ ಸಂಘದಲ್ಲಿ ವಕೀಲರು,’ 15 ವರ್ಷದಿಂದ ಶಿರಾ ಕೋರ್ಟ್ ನಲ್ಲಿ ಸಾರ್ವಜನಿಕ ಅಭಿಯೋಜಕರಿಲ್ಲ. ಈ ಬಗ್ಗೆ ಕಾನೂನು ಸಚಿವರಾಗಿದ್ದ ನಿಮಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಿಂಗಳಿಗೊಮ್ಮೆ ಮಧುಗಿರಿಯಲ್ಲಿ ನಡೆಯುತ್ತಿರುವ ಎ.ಸಿ. ಕೋರ್ಟ್ ನ್ನು ಶಿರಾದಲ್ಲಿಯೂ ನಡೆಸುವಂತೆ ಕೋರಿಕೆ ಇಟ್ಟಿದ್ದೇವು. ಅದನ್ನು ನೀವು ಈಡೇರಿಸಿಲ್ಲ’ ಎಂದು ಹೇಳಿ  ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಜೆಡಿಎಸ್- ಬಿಎಸ್‌ಪಿ ಸರಕಾರ ಖಚಿತ: ಕುಮಾರಸ್ವಾಮಿ