Select Your Language

Notifications

webdunia
webdunia
webdunia
webdunia

ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿಸಲಾಗಿದೆ. ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ – ಬಿಜೆಪಿ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ

ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿಸಲಾಗಿದೆ. ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ – ಬಿಜೆಪಿ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ
ಹುಬ್ಬಳ್ಳಿ , ಸೋಮವಾರ, 7 ಮೇ 2018 (07:15 IST)
ಹುಬ್ಬಳ್ಳಿ : ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿಸಲಾಗಿದೆ. ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ನಟ ಪ್ರಕಾಶ್ ರೈ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ನಾನು ಕೆಟ್ಟ ನಟನಲ್ಲ. ಆದರೂ ಯಾವುದೇ ಬಾಲಿವುಡ್ ಚಿತ್ರಗಳ ಆಫರ್ ಬರುತ್ತಿಲ್ಲ. ನನ್ನ ಚಿತ್ರಗಳು ಚೆನ್ನಾಗಿಯೇ ನಡೆಯುತ್ತಿವೆ. ಇದುವರೆಗೆ ನಿರ್ದೇಶಕರ ಯಾವುದೇ ಫೋನ್ ಕರೆ ಬಂದಿಲ್ಲ ಬಿಜೆಪಿಯಿಂದ ಈ ವಿಷಯದಲ್ಲಿಯೂ ಭಯದ ವಾತಾವರಣ ಸೃಷ್ಟಿಸಲಾಗಿದೆ. ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಜಸ್ಟ್ ಆಸ್ಕಿಂಗ್ ಪ್ರಶ್ನೆಗಳನ್ನು ಮಾತ್ರ ಕೇಳಲ್ಲ, ಚರ್ಚಾಕೂಟ ಏರ್ಪಡಿಸುತ್ತೇವೆ. ಚುನಾವಣೆ ನಂತರವೂ ನಿರಂತರ ಹೋರಾಟ ಮುಂದುವರಿಯುತ್ತೆ. ನಾನು ಹಿಂದುತ್ವದ ವಿರೋಧಿಯಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಯಾವುದನ್ನಾದರೂ ಜನರು ಆಯ್ಕೆ ಮಾಡಿಕೊಳ್ಳಲಿ. ಯಾವುದೇ ಸರ್ಕಾರ ಬಂದರೂ ನಾನು ಪ್ರಶ್ನೆ ಕೇಳುತ್ತೇನೆ ‘ಎಂದು ನಟ ಪ್ರಕಾಶ್ ರೈತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ಬಂದ ಇಷ್ಟೂ ವರ್ಷಗಳಲ್ಲಿ ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿಸಿ ಕಾಂಗ್ರೆಸ್‌ ಆಡಳಿತ ನಡೆಸಿದೆ- ಪ್ರಧಾನಿ ನರೇಂದ್ರ ಮೋದಿ