Select Your Language

Notifications

webdunia
webdunia
webdunia
webdunia

ಎಂ.ಬಿ.ಪಾಟೀಲ್‌ರನ್ನು ಖಡ್ಗದಿಂದ ಕತ್ತರಿಸುತ್ತೇನೆ ಎಂದ ಬಿಜೆಪಿ ನಾಯಕಿ ವಿರುದ್ಧ ದೂರು ದಾಖಲು

ಎಂ.ಬಿ.ಪಾಟೀಲ್‌ರನ್ನು ಖಡ್ಗದಿಂದ ಕತ್ತರಿಸುತ್ತೇನೆ ಎಂದ ಬಿಜೆಪಿ ನಾಯಕಿ ವಿರುದ್ಧ ದೂರು ದಾಖಲು
ವಿಜಯಪುರ , ಶುಕ್ರವಾರ, 30 ಮಾರ್ಚ್ 2018 (13:30 IST)
ವೀರಶೈವ ಲಿಂಗಾಯತ ಸಮಾವೇಶದಲ್ಲಿ ಈಚೆಗೆ ಮಾಡಿದ ಪ್ರಚೋದನಕಾರಿ ಭಾಷಣ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. 
ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ದಿವ್ಯಾ ಹಾಗರಗಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾವೇಶದಲ್ಲಿ ಪ್ರಚೋದಕನಕಾರಿಯಾಗಿ ದಿವ್ಯಾ ಹಾಗರಗಿ ಭಾಷಣ ಮಾಡಿದ್ದರು. 
 
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ರನ್ನು ಖಡ್ಗ ದಿಂದ ಪೀಸ್ ಪೀಸ್ ಮಾಡುತ್ತೇನೆ ಎಂದು ದಿವ್ಯಾ ಹಾಗರಗಿ ನೀಡಿದ ಹೇಳಿಕೆ ವಿವಾದಕ್ಕೆ ಒಳಗಾಗಿತ್ತು. ಹೀಗಾಗಿ ದಲಿತ ಮುಖಂಡ ಶ್ರೀನಾಥ್ ಪೂಜಾರಿ ವಿಜಯಪುರ ನಗರದ ಗೋಲಗುಂಬಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸವನ್ನು ದಿವ್ಯಾ ಹಾಗರಗಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮುಂಡೇದು ಮೋದಿ ಬರೀ ಮಾತಾಡುತ್ತೆ, ಕೆಲಸ ಮಾಡಲ್ಲ: ಸಿಎಂ ಇಬ್ರಾಹಿಂ