Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿರುವ ನಾಟಕೀಯ ಸರ್ಕಾವರನ್ನು ಕಿತ್ತೊಗೆಯಬೇಕು - ಛತ್ತೀಸ್ ಗಢ ಸಿಎಂ ರಮಣ್ ಸಿಂಗ್

ರಾಜ್ಯದಲ್ಲಿರುವ ನಾಟಕೀಯ ಸರ್ಕಾವರನ್ನು ಕಿತ್ತೊಗೆಯಬೇಕು - ಛತ್ತೀಸ್ ಗಢ ಸಿಎಂ ರಮಣ್ ಸಿಂಗ್
ಬೆಂಗಳೂರು , ಗುರುವಾರ, 19 ಏಪ್ರಿಲ್ 2018 (14:36 IST)
ಬೆಂಗಳೂರು : ರಾಜ್ಯದಲ್ಲಿರುವ ನಾಟಕೀಯ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಛತ್ತೀಸ್ ಗಢ ಸಿಎಂ ರಮಣ್ ಸಿಂಗ್ ಅವರು ಕರೆ ನೀಡಿದ್ದಾರೆ.


ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮಣ್ ಸಿಂಗ್ ಅವರು,’ ರಾಜ್ಯದಲ್ಲಿ 3,500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದರ ಬಗ್ಗೆ ಉತ್ತರ ಕೊಡದೇ ಸಿಎಂ ಸಿದ್ದರಾಮಯ್ಯ ಸುಮ್ಮನಿದ್ದಾರೆ’ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ನಾನು ಇಂದು ಶಿಕಾರಪುರದಲ್ಲಿ ನಾಮಪತ್ರ ಸಲ್ಲಿಸಲಿರುವ ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಲು ಬಂದಿದ್ದೇನೆ. ಯಡಿಯೂರಪ್ಪನವರಿಗೆ ನಮ್ಮ ಛತ್ತೀಸ್ ಗಢ ಜನತೆ ಪರವಾಗಿ ಶುಭಾಶಯಗಳು. ಯಡಿಯೂರಪ್ಪ ಅವಧಿಯಲ್ಲಿ ಕರ್ನಾಟಕ ಸುಭದ್ರವಾಗಿತ್ತು. ಕೇಂದ್ರ ಸರ್ಕಾರ ಕೂಡ ದೇಶಧಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಷ್ ಷರತ್ತು ಕೇಳಿ ದಂಗಾದ ಕಾಂಗ್ರೆಸ್ ನಾಯಕರು!