Select Your Language

Notifications

webdunia
webdunia
webdunia
webdunia

ಮೊಹಮ್ಮದ್ ನಲಪಾಡ್ ಪ್ರಕರಣಕ್ಕೆ ಮತ್ತೆ ಜೀವ

ಮೊಹಮ್ಮದ್ ನಲಪಾಡ್ ಪ್ರಕರಣಕ್ಕೆ ಮತ್ತೆ ಜೀವ
ಬೆಂಗಳೂರು , ಮಂಗಳವಾರ, 29 ಮೇ 2018 (09:03 IST)
ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಜಾಮೀನು ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬಂದಿದೆ. ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮಂಡಿಸಿದ್ದಾರೆ.

ನಲಪಾಡ್  ನಕ್ಕಲ್ ರಿಂಗ್ ನಿಂದ ಹೊಡೆದ ಬಗ್ಗೆ ಆರೋಪಪಟ್ಟಿಯಲ್ಲಿಲ್ಲ. ಇವರಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಇದು ಕೊಲೆ ಉದ್ದೇಶವಿಲ್ಲದ ಜಗಳವಷ್ಟೇ. ಮಾಧ್ಯಮಗಳು ವೈಭವೀಕರಿಸಿದ್ದರಿಂದ ಸಮಸ್ಯೆಯಾಯಿತು. ಶಾಸಕ ಹ್ಯಾರಿಸ್ ಗೆ ಚುನಾವಣೆ ಟಿಕೆಟ್ ಸಿಗುವುದೂ ಕಷ್ಟವಾಗಿತ್ತು ಎಂದು ವಕೀಲ ಉಸ್ಮಾನ್ ವಾದ ಮಂಡಿಸಿದ್ದಾರೆ. ಇದೀಗ ಆರೋಪಿ ಪರ ವಕೀಲರ ವಾದ ಮಂಡನೆ ಪೂರ್ಣವಾಗಿದ್ದು, ಇಂದು ಮತ್ತೊಮ್ಮೆ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಮುನ್ನಡೆಸಲು ಕಾಂಗ್ರೆಸ್ ನಲ್ಲಿ ನಡೆದಿದೆ ಪೈಪೋಟಿ